ADVERTISEMENT

ಕನ್ನಸಂದ್ರದಲ್ಲಿ ಅಪ್ರಕಟಿತ ಶಿಲಾಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 2:18 IST
Last Updated 19 ಸೆಪ್ಟೆಂಬರ್ 2020, 2:18 IST
ಮಾಗಡಿ ಕನ್ನಸಂದ್ರದ ಬಂಡೆಯ ಮೇಲಿನ ಅಪ್ರಕಟಿತ ಶಾಸನವನ್ನು ಸಂಶೋಧಕ ಪ್ರೊ.ಅದರಂಗಿ ರುದ್ರೇಶ್‌ ಪತ್ತೆ ಹಚ್ಚಿದ್ದಾರೆ.
ಮಾಗಡಿ ಕನ್ನಸಂದ್ರದ ಬಂಡೆಯ ಮೇಲಿನ ಅಪ್ರಕಟಿತ ಶಾಸನವನ್ನು ಸಂಶೋಧಕ ಪ್ರೊ.ಅದರಂಗಿ ರುದ್ರೇಶ್‌ ಪತ್ತೆ ಹಚ್ಚಿದ್ದಾರೆ.   

ಮಾಗಡಿ: ಸೋಲೂರು ಸೀಮೆಗೆ ಸೇರಿರುವ ಕನ್ನಸಂದ್ರದಲ್ಲಿ 15ನೇ ಶತಮಾನಕ್ಕೆ ಸೇರಿರುವ ಹೊಯ್ಸಳರ ಕಾಲದ 3 ಶಿಲಾಶಾಸನಗಳು ಮತ್ತು ಮಹಾಸತಿ ಕಲ್ಲೊಂದನ್ನು ಪತ್ತೆ ಮಾಡಿರುವುದಾಗಿ ಕನ್ನಡ ಪ್ರಾಧ್ಯಾಪಕ ಹಾಗೂ ಇತಿಹಾಸ ಸಂಶೋಧಕ ಪ್ರೊ.ಅದರಂಗಿ ರುದ್ರೇಶ್‌ ತಿಳಿಸಿದರು.

ಕನ್ನಸಂದ್ರದಲ್ಲಿ ಕ್ಷೇತ್ರ ಕಾರ್ಯ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಗ್ರಾಮದ ಪಕ್ಕದಲ್ಲಿ ಇರುವ ಕೆರೆಯಿಂದ ಊರಿಗೆ ಕನ್ನಸಂದ್ರ ಎಂದು ಹೆಸರು ಬಂದಿದೆ. ಕನ್ಯೆ ಸಮುದ್ರ ಎಂದು ಕರೆಯಲಾಗುತ್ತಿತ್ತು. ನಂತರ ಕನ್ನಸಂದ್ರ ಎಂದು ಬಳಕೆಗೆ ಬಂದಿರಬಹುದು. ಶಿಥಿಲವಾಗಿರುವ ಬಸವಣ್ಣ ದೇವಾಲಯವಿದೆ. ಕಂಬದಲ್ಲಿ ಬಸವಣ್ಣನನ್ನು ಕೆತ್ತಲಾಗಿದೆ. ಹೊಯ್ಸಳರ ಕಾಲದ ಮಹಾಸತಿ ಕಲ್ಲು ರಕ್ಷಣೆ ಇಲ್ಲದೆ ಪಾಳುಮನೆ ಒಳಗೆ ಪತ್ತೆಯಾಗಿದೆ. ಇತಿಹಾಸ ತಜ್ಞರಾದ ಡಾ.ಎಚ್‌.ಎಸ್‌.ಗೋಪಾಲ್‌ ರಾವ್‌ ತಂಡದವರನ್ನು ಕನ್ನಸಂದ್ರಕ್ಕೆ ಕರೆದೊಯ್ದು ಗ್ರಾಮದ ಬಗ್ಗೆ ತಳಸ್ಪರ್ಶಿ ಅಧ್ಯಯನ ನಡೆಸಲಾಗುವುದು ಎಂದರು.

ಬಸವಣ್ಣ ದೇವಾಲಯದ ಪರೋಹಿತ ಶೇಖರಪ್ಪ, ಗ್ರಾಮದ ಹಿರಿಯ ರೇಣುಕಯ್ಯ ಸ್ಥಳದ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.