ADVERTISEMENT

ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:07 IST
Last Updated 8 ನವೆಂಬರ್ 2018, 20:07 IST
ತಗಚಕುಪ್ಪೆ ಲಕ್ಷ್ಮೀದೇವಿ ಅಮ್ಮನವರಿಗೆ ಮಾಡಿದ್ದ ಅಲಂಕಾರ
ತಗಚಕುಪ್ಪೆ ಲಕ್ಷ್ಮೀದೇವಿ ಅಮ್ಮನವರಿಗೆ ಮಾಡಿದ್ದ ಅಲಂಕಾರ   

ಮಾಗಡಿ: ಬಲಿಪಾಡ್ಯಮಿ ಅಂಗವಾಗಿ ತಗಚಕುಪ್ಪೆ ಗ್ರಾಮದಲ್ಲಿ ಲಕ್ಷ್ಮಿದೇವಿ ಅಮ್ಮನವರ ಜಾತ್ರಾ ಮಹೋತ್ಸವ ಗುರುವಾರ ಭಕ್ತಾಧಿಗಳ ಸಡಗರ ಸಂಭ್ರಮದ ನಡುವೆ ವೈಭವದಿಂದ ನಡೆಯಿತು.

ಗ್ರಾಮದ ಮುಖಂಡ ನರಸಿಂಹಮೂರ್ತಿ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮದಲ್ಲಿ ತಲೆಮಾರಿನಿಂದಲೂ ಬಲಿಂದ್ರರಾಯಸ್ವಾಮಿ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಶ್ರದ್ಧೆಯಿಂದ ಆಚರಿಸಿಕೊಂಡು ಬರುವುದು ವಾಡಿಕೆಯಾಗಿದೆ ಎಂದರು.

ಪುಣ್ಯಕಥೆಯಲ್ಲಿ ಮಹಾವಿಷ್ಣು, ಬಲಿಚಕ್ರವರ್ತಿಯಿಂದ ಮೂರು ಅಡಿ ಭೂಮಿಯನ್ನು ದಾನವಾಗಿ ಬೇಡಿದ ಮಹತ್ವವನ್ನು ಹಿರಿಯರು ಬಲಿಪಾಡ್ಯಮಿ ದಿನ ಕಥೆಯ ರೂಪದಲ್ಲಿ ಹೇಳುತ್ತಿದ್ದರು. ಯುವಜನರಿಗೆ ಬಲಿಪಾಡ್ಯಮಿ ಮಹತ್ವ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ADVERTISEMENT

ಅಗ್ನಿಶಾಮಕ ದಳದ ಅಧಿಕಾರಿ ನರಸೇಗೌಡ ಮಾತನಾಡಿದರು. ಪದ್ದಮಕ್ಕ ನರಸಿಂಹಮೂರ್ತಿ, ಗೌರಮ್ಮ ಶಿವಕುಮಾರ್‌, ವಸಂತಲಕ್ಷ್ಮಿ, ಲೋಕೇಶ್‌, ಸಿದ್ದಗಂಗಮ್ಮ ಶಂಭಯ್ಯ, ಶಿಕ್ಷಕ ಆನಂದ್‌ ಯಾದವ್‌ ಮಾತನಾಡಿದರು.

ಅರ್ಚಕ ಎಂ.ಚೆನ್ನಪ್ಪ ಪೂಜಾಧಿಗಳನ್ನು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.