ADVERTISEMENT

ಭೂಸ್ವಾಧೀನ ವಿರುದ್ಧ 13 ಹಳ್ಳಿ ರೈತರ ಒಗ್ಗಟ್ಟು ಪ್ರದರ್ಶನ

ಧರಣಿ ಸ್ಥಳದಲ್ಲಿ ಗ್ರಾಮ ಸಂಕಲ್ಪಸಮಾವೇಶ * 1,197 ದಿನಕ್ಕೆ ಕಾಲಿಟ್ಟ ಹೋರಾಟ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 0:09 IST
Last Updated 15 ಜುಲೈ 2025, 0:09 IST
ದೇವನಹಳ್ಳಿ ತಾಲ್ಳುಕು ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ನಡೆದ ‘ಗ್ರಾಮ ಸಂಕಲ್ಪಸಮಾವೇಶ’ದಲ್ಲಿ ವಿವಿಧ ಸಂಘಟನೆಯ ರಾಜ್ಯ ನಾಯಕರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶನ ಮಾಡಿದರು.
ದೇವನಹಳ್ಳಿ ತಾಲ್ಳುಕು ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ನಡೆದ ‘ಗ್ರಾಮ ಸಂಕಲ್ಪಸಮಾವೇಶ’ದಲ್ಲಿ ವಿವಿಧ ಸಂಘಟನೆಯ ರಾಜ್ಯ ನಾಯಕರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶನ ಮಾಡಿದರು.   

ದೇವನಹಳ್ಳಿ: ಭೂಸ್ವಾಧೀನ ವಿರೋಧಿಸಿ ರೈತರು ಸಾವಿರಕ್ಕೂ ಹೆಚ್ಚು ದಿನಗಳಿಂದ ನಡೆಸುತ್ತಿರುವ ಧರಣಿ ಸ್ಥಳದಲ್ಲಿ ಸೋಮವಾರ ನಡೆದ ‘ಗ್ರಾಮ ಸಂಕಲ್ಪ ಸಮಾವೇಶ’ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಯಿತು.

ಭೂಸ್ವಾಧೀನ ವಿರೋಧಿ ಹೋರಾಟ 1,197 ದಿನಕ್ಕೆ ಕಾಲಿಟ್ಟಿದ್ದು, ‘ಪ್ರಾಣ ಹೋದರೂ ಭೂಮಿ ಕೊಡುವುದಿಲ್ಲ’ ಎಂದು ರೈತರು ಘೋಷಿಸಿದರು. ಹೋರಾಟ ಅಂತಿಮ ಹಂತ ತಲುಪಿರುವಾಗ ಕೆಲವರು ಗೊಂದಲ ಸೃಷ್ಟಿಸಿದ್ದಾರೆ. ನಮ್ಮ ನಿರ್ಧಾರ ಅಚಲವಾಗಿದೆ ಎಂದು ಒಕ್ಕೊರಲಿನಿಂದ ಘೋಷಿಸಿದರು. 

ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹತ್ತು ದಿನಗಳಿಂದ ಈ ಭಾಗದಲ್ಲಿ ಗ್ರಾಮ ಸಭೆ ನಡೆಸಿದೆ. 13 ಹಳ್ಳಿಗಳ ಶೇ.73 ರಿಂದ ಶೇ.80ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂದು ಪ್ರತಿಭಟನಾ ಪತ್ರಕ್ಕೆ ಸಹಿ ಹಾಕಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.