ADVERTISEMENT

‘ಕಲ್ಲಿನ ಶೆಡ್ ತೆರವುಗೊಳಿಸಿ’

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:10 IST
Last Updated 29 ಅಕ್ಟೋಬರ್ 2020, 4:10 IST
ವಿಜಯಪುರದಲ್ಲಿ ಶಿಥಿಲವಾಗಿರುವ ಕಲ್ಲಿನ ಶೆಡ್ ಹಾಗೂ ಅರಳಿ ಮರದಡಿ ವ್ಯಾಪಾರದಲ್ಲಿ ತೊಡಗಿಸಿರುವ ವ್ಯಾಪಾರಸ್ಥರು
ವಿಜಯಪುರದಲ್ಲಿ ಶಿಥಿಲವಾಗಿರುವ ಕಲ್ಲಿನ ಶೆಡ್ ಹಾಗೂ ಅರಳಿ ಮರದಡಿ ವ್ಯಾಪಾರದಲ್ಲಿ ತೊಡಗಿಸಿರುವ ವ್ಯಾಪಾರಸ್ಥರು   

ವಿಜಯಪುರ: ವಾರದ ಸಂತೆ ಮೈದಾನದಲ್ಲಿರುವ ಮರದ ಕೊಂಬೆ ಹಾಗೂ ಶಿಥಿಲವಾಗಿರುವ ಕಲ್ಲಿನ ಶೆಡ್ ತೆರವುಗೊಳಿಸಿ ಅನುಕೂಲ ಮಾಡಬೇಕು ಎಂದು ಇಲ್ಲಿನ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

‘ಪ್ರತಿ ಶುಕ್ರವಾರ ವಾರದ ಸಂತೆ ನಡೆಯುತ್ತದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ವ್ಯಾಪಾರ ವಹಿವಾಟು ನಡೆಸಲು ಇಲ್ಲಿಗೆ ಬರುತ್ತಾರೆ. ಸಂತೆಯಲ್ಲಿರುವ ಅರಳಿ ಮರದ ಕೊಂಬೆಗಳು ಒಣಗಿಹೋಗಿವೆ. ಜೋರಾಗಿ ಗಾಳಿ ಬಂದರೆ ಯಾವುದೇ ಸಮಯದಲ್ಲಾದರೂ ಮುರಿದು ಬೀಳುವ ಸ್ಥಿತಿಯಲ್ಲಿವೆ’ ಎಂದು ವ್ಯಾಪಾರಿ ಸೈಯದ್ ರಹಮತ್‌ ಉಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.

‘ಸಂತೆ ಮೈದಾನದಲ್ಲಿ ಎರಡು ಕಲ್ಲಿನ ಶೆಡ್‌ಗಳಿವೆ. ಇವುಗಳನ್ನು ನಿರ್ಮಾಣ ಮಾಡಿ ಹಲವು ವರ್ಷಗಳೇ ಕಳೆದಿವೆ. ಕಲ್ಲಿನ ಚಾವಣಿ ಸೋರುತ್ತಿದೆ. ಇದರ ಕೆಳಗೆ ವ್ಯಾಪಾರಸ್ಥರು ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ಜಾಗವೂ ವ್ಯರ್ಥವಾಗುತ್ತಿದೆ. ಇಲ್ಲಿ ಜಾಗದ ಕೊರತೆಯಿಂದಾಗಿ ಬಹಳಷ್ಟು ಮಂದಿ ನಾಡಕಚೇರಿ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು’ ಎಂದುವ್ಯಾಪಾರಿ ರಾಜೇಶ್ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.