ADVERTISEMENT

ದೇಶಪ್ರೇಮ ಜಾಗೃತಿಗೆ ಪೆಂಟಥಾನ್ ಓಟ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 2:10 IST
Last Updated 28 ಜನವರಿ 2021, 2:10 IST
ಫಿಟ್ ಇಂಡಿಯಾ ರಿಪಬ್ಲಿಕ್ ರನ್ ಪೆಂಟಥಾನ್ ಓಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ಫಿಟ್ ಇಂಡಿಯಾ ರಿಪಬ್ಲಿಕ್ ರನ್ ಪೆಂಟಥಾನ್ ಓಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು   

ಆನೇಕಲ್:ಯುವಜನತೆ ದೇಶ ಭಕ್ತಿ, ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಕ್ರೀಡೆಗಳು ಉಪಯುಕ್ತವಾಗಿವೆ. ಹಾಗಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹಾಕ್‌ ಈಗಲ್‌ ಮಾರ್ಷಿಯಲ್‌ ಆರ್ಟ್ಸ್‌ ಅಕಾಡೆಮಿಯ ಮುಖ್ಯಸ್ಥ ನಾಗೇಂದ್ರ ರಾವ್‌ ತಿಳಿಸಿದರು.

ಅವರು ಪಟ್ಟಣದಲ್ಲಿ ಅಕಾಡೆಮಿಯಿಂದ ಆಯೋಜಿಸಿದ್ದ ಫಿಟ್‌ ಇಂಡಿಯಾ ರಿಪಬ್ಲಿಕ್ ರನ್‌ ಪೆಂಟಥಾನ್‌ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂಬ ಸಂದೇಶವನ್ನು ಯುವಜನತೆ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ADVERTISEMENT

ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಲು 5 ಕಿ.ಮೀ ಪೆಂಟಥಾನ್‌ ಓಟ ಆಯೋಜಿಸಲಾಗಿದೆ. 300ಕ್ಕೂ ಹೆಚ್ಚು ಮಂದಿ ಓಟದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಪುರುಷರ ವಿಭಾಗದಲ್ಲಿ ರಾಹುಲ್(ಪ್ರಥಮ), ಅನಿಲ್‌ ಸಿಂಗ್(ದ್ವಿತೀಯ), ಕಿರಣ್(ತೃತೀಯ) ಹಾಗೂ ಮಹಿಳಾ ವಿಭಾಗದಲ್ಲಿ ದಿವ್ಯಾಂಜಲಿ(ಪ್ರಥಮ), ಪೂಜಾ(ದ್ವಿತೀಯ), ಚೈತನ್ಯ(ತೃತೀಯ) ಬಹುಮಾನ ಗಳಿಸಿದರು. ಹಾಕ್‌ ಈಗಲ್‌ ಮಾರ್ಷಿಯಲ್‌ ಆರ್ಟ್ಸ್‌ ಅಕಾಡೆಮಿಯ ಆರ್‌. ಹರಿಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.