ADVERTISEMENT

ರಾಗಿ ಉತ್ತಮ ಇಳುವರಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 4:34 IST
Last Updated 29 ಅಕ್ಟೋಬರ್ 2020, 4:34 IST
ಕಾರೇಪುರ ಗ್ರಾಮದಲ್ಲಿ ರಾಗಿ ಕ್ಷೇತ್ರೋತ್ಸವ ನಡೆಯಿತು
ಕಾರೇಪುರ ಗ್ರಾಮದಲ್ಲಿ ರಾಗಿ ಕ್ಷೇತ್ರೋತ್ಸವ ನಡೆಯಿತು   

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ರಾಗಿ ಬೆಳೆ ಉತ್ತಮವಾಗಿದೆ. ಹದವಾಗಿ ಮಳೆಯಾಗಿರುವ ಕಾರಣ ಇಳುವರಿ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎನ್‌. ಶಿವಲಿಂಗಯ್ಯ ಹೇಳಿದರು.

ತಾಲ್ಲೂಕಿನ ಕಾರೇಪುರ ಗ್ರಾಮದಲ್ಲಿ ನಡೆದ ರಾಗಿ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, 120‌ರಿಂದ 125 ದಿನಗಳಲ್ಲಿ ಕೊಯ್ಲಿಗೆ ಬರುವ ಎಂ.ಆರ್‌6, 100 ರಿಂದ 105 ದಿನಗಳಲ್ಲಿ ಕೊಯ್ಲಿಗೆ ಬರುವ ಎಂ.ಎಲ್‌ 365, ಅಲ್ಪಾವಧಿ ತಳಿಯಾದ ಕೆ.ಎಂ.ಆರ್‌ 340 ತಳಿಯು 95 ರಿಂದ 100 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ ಎಂದು ತಿಳಿಸಿದರು.

ಮುಂಗಾರಿನ ಸಮಯದಲ್ಲಿ ರಾಗಿ ಬಿತ್ತನೆ ಬೇಗನೆ ಆರಂಭವಾದರೆ ರೈತರು ದೀರ್ಘಾವಧಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದರು.

ADVERTISEMENT

ಕ್ಷೇತ್ರೋತ್ಸವದಲ್ಲಿ ಯೋಜನಾ ಸಹಾಯಕ ಚಂದ್ರಶೇಖರ್, ಪ್ರಗತಿಪರ ರೈತ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.