ADVERTISEMENT

ದೊಡ್ಡಬಳ್ಳಾಪುರ: ರಾಗಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:16 IST
Last Updated 22 ಅಕ್ಟೋಬರ್ 2020, 4:16 IST
ಚಿಕ್ಕರಾಯಪ್ಪನಹಳ್ಳಿ ಕೆರೆ ಕೋಡಿ ಬಿದ್ದಿರುವುದು
ಚಿಕ್ಕರಾಯಪ್ಪನಹಳ್ಳಿ ಕೆರೆ ಕೋಡಿ ಬಿದ್ದಿರುವುದು   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ರಾಗಿ ಬೆಳೆ ನೆಲಕಚ್ಚಿದೆ.

ಕಸಬಾ ಹೋಬಳಿಯಲ್ಲಿ 38 ಮಿ.ಮೀ. ಮಳೆಯಾಗಿದೆ. ನಂದಿಬೆಟ್ಟದ ತಪ್ಪಲಿನ ಚಿಕ್ಕರಾಯಪ್ಪನಹಳ್ಳಿ ಕೆರೆ ಕೋಡಿ ಬಿದ್ದಿದೆ.

ಕಸಬಾ ಹೋಬಳಿ ಮುತ್ತೂರು, ಬಾಶೆಟ್ಟಿಹಳ್ಳಿ, ಸಾಸಲು ಹೋಬಳಿಯ ಗುಂಡಮಗೆರೆ ಹೊರತುಪಡಿಸಿದರೆ ಉಳಿದ ಯಾವುದೇ ಕೆರೆಗಳಿಗೂ ನೀರು ಬಂದಿಲ್ಲ. ಮಂಗಳವಾರ ರಾತ್ರಿ ಬಿದ್ದಿರುವ ಮಳೆಯ ಪ್ರಮಾಣದಂತೆ ಮಧುರೆ ಹೋಬಳಿ 37 ಮಿ.ಮೀ, ದೊಡ್ಡಬೆಳವಂಗಲ 34 ಮಿ.ಮೀ, ತೂಬಗೆರೆ 24 ಮಿ.ಮೀ, ಸಾಸಲು ಹೋಬಳಿ 26 ಮಿ.ಮೀ.ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.