ADVERTISEMENT

ಕಲ್ಲು ಎತ್ತಿ ಹಾಕಿ ರೌಡಿಶೀಟರ್‌ನ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:00 IST
Last Updated 6 ಅಕ್ಟೋಬರ್ 2020, 19:00 IST
ಹತ್ಯೆಯಾದ ಶ್ರೀಕಾಂತ್
ಹತ್ಯೆಯಾದ ಶ್ರೀಕಾಂತ್   

ಆನೇಕಲ್: ತಾಲ್ಲೂಕಿನ ಅರೇಹಳ್ಳಿ ಬಳಿ ಹೊಲವೊಂದರಲ್ಲಿ ರೌಡಿಶೀಟರ್‌ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ.

‘ಬಳ್ಳೂರು ಗ್ರಾಮದ ಶ್ರೀಕಾಂತ್‌ (26) ಹತ್ಯೆಯಾದವನು. ಬಳ್ಳೂರು ಗ್ರಾಮದ ಶ್ರೀಕಾಂತ್‌ ಅತ್ತಿಬೆಲೆಯಲ್ಲಿ ವಾಸವಾಗಿದ್ದ. ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಈ ವ್ಯಕ್ತಿಯ ವಿರುದ್ಧ ಹಲವಾರು ಪ್ರಕರಣಗಳಿವೆ. ಸೋಮವಾರ ಸಂಜೆ ನಾಲ್ಕೈದು ಮಂದಿ ಸ್ನೇಹಿತರೊಂದಿಗೆ ಮನೆಯಿಂದ ಹೊರಟ ಎನ್ನಲಾಗಿದ್ದು ಕುಡಿದ ಅಮಲಿನಲ್ಲಿ ಜಗಳವಾಡಿ ಹತ್ಯೆ ನಡೆಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT