ADVERTISEMENT

ಪಂಚಾಯಿತಿ ಚುನಾವಣೆ: ರೌಡಿ ಶೀಟರ್‌ಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 20:25 IST
Last Updated 17 ಡಿಸೆಂಬರ್ 2020, 20:25 IST
ರೌಡಿಗಳೊಂದಿಗೆ ಮಾಹಿತಿ ಪಡೆದ ಡಿ.ಸಿ.ಪಿ ಬಾಬಾ
ರೌಡಿಗಳೊಂದಿಗೆ ಮಾಹಿತಿ ಪಡೆದ ಡಿ.ಸಿ.ಪಿ ಬಾಬಾ   

ದೇವನಹಳ್ಳಿ: ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಈಶಾನ್ಯ ವಲಯ ಡಿ.ಸಿ.ಪಿ ಬಾಬಾ ಸಿ.ಕೆ ಅವರು ರೌಡಿ ಶೀಟರ್‌ಗಳ ಪೇರೆಡ್ ನಡೆಸಿ ಎಚ್ಚರಿಕೆ ನೀಡಿದರು.

ರೌಡಿಗಳೊಂದಿಗೆ ನಡಾವಳಿ ಮತ್ತು ಪ್ರಸ್ತುತ ನಡೆಸುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಗ್ರಾಮ ಪಂಚಾಯಿತಿ ಚುನಾವಣೆ ಡಿ.27ರಂದು ನಡೆಯಲಿದ್ದು, ಯಾವುದೇ ಅಭ್ಯರ್ಥಿ ಪರ ಅಥವಾ ಪಕ್ಷದ ಬೆಂಬಲಿತರ ಪರ ಬೆದರಿಕೆ, ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮತಯಾಚಿಸುವುದು ಕಾನೂನು ಬಾಹಿರ ಮತ್ತು ಅಪರಾಧ ಎಂದು ಹೇಳಿದರು.

ಸಮಾಜದಲ್ಲಿ ಪರಸ್ಪರ ವಿಶ್ವಾಸದಿಂದ ಇರಬೇಕು. ಹಳೇ ದ್ವೇಷ ಕೆದಕಬಾರದು. ಭವಿಷ್ಯದ ಜೀವನದ ಬಗ್ಗೆ ಚಿಂತಿಸಬೇಕು. ನಿಮ್ಮ ಮಕ್ಕಳನ್ನು ಸನ್ನಡತೆಯಲ್ಲಿ ಬೆಳೆಸಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.

ADVERTISEMENT

ದೇವನಹಳ್ಳಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ಒಟ್ಟು 133 ರೌಡಿ ಶೀಟರ್ ಗಳ ಪೈಕಿ ಸತ್ತವರು ಹಾಗೂ ಗೈರುಹಾಜರಿ ಹೊರತುಪಡಿಸಿ 67 ರೌಡಿ ಶೀಟರ್‌ಗಳು ಪೆರೇಡ್‍ ನಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.