ADVERTISEMENT

ಶರತ್ ಬಚ್ಚೇಗೌಡ ಪ್ರಮಾಣ ವಚನ: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 14:11 IST
Last Updated 22 ಡಿಸೆಂಬರ್ 2019, 14:11 IST
ಹೊಸಕೋಟೆ ನಗರದಲ್ಲಿ ಭಾನುವಾರ ರೋಡ್ ಶೋ ನಡೆಸಿದ ಶಾಸಕ ಶರತ್ ಬಚ್ಚೇಗೌಡ ಮತದಾರರಿಗೆ ಕೃತಜ್ಞತೆ  ಸಲ್ಲಿಸಿದರು. ಅಭಿಮಾನಿಗಳು ಸೇಬು ಮತ್ತು ಹೂವಿನ ಹಾರಗಳಿಂದ ಅಭಿನಂದಿಸಿದರು
ಹೊಸಕೋಟೆ ನಗರದಲ್ಲಿ ಭಾನುವಾರ ರೋಡ್ ಶೋ ನಡೆಸಿದ ಶಾಸಕ ಶರತ್ ಬಚ್ಚೇಗೌಡ ಮತದಾರರಿಗೆ ಕೃತಜ್ಞತೆ  ಸಲ್ಲಿಸಿದರು. ಅಭಿಮಾನಿಗಳು ಸೇಬು ಮತ್ತು ಹೂವಿನ ಹಾರಗಳಿಂದ ಅಭಿನಂದಿಸಿದರು   

ಸೂಲಿಬೆಲೆ: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಭಾನುವಾರ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ, ಹೊಸಕೋಟೆ ನಗರದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಭರ್ಜರಿ ರೋಡ್ ಶೋ ನಡೆಸಿದರು.

ಮಧ್ಯಾಹ್ನದ ನಂತರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿಂದ ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅವರನ್ನು ಬೃಹತ್ ಗಾತ್ರದ ಸೇಬಿನ ಹಾರ, ಹೂವಿನ ಹಾರಗಳಿಂದ ಹಾಗೂ ಹೂ ಮಳೆಗೆರದು ಸ್ವಾಗತಿಸಿ ಅಭಿನಂದಿಸಿದರು.

ADVERTISEMENT

ಶರತ್ ಬಚ್ಚೇಗೌಡ ಅವರ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪಟಾಕಿ ಸಿಡಿಸಿದರು. ಲಾಡು ವಿತರಣೆ ಮಾಡಿ ಮತದಾರರ ಜತೆಯಲ್ಲಿ ಸಂಭ್ರಮ ಆಚರಿಸಿದರು.

ಮೆರವಣೆಗೆಯಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಸೊಣ್ಣಪ್ಪ, ಸಿ.ಮಂಜುನಾಥ್, ಕುರುಬರ ಸಂಘದ ಮಾಜಿ ಅಧ್ಯಕ್ಷ ಅಬಕಾರಿ ಶ್ರೀನಿವಾಸಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಬಿಡಿಸಿಸಿ ನಿರ್ದೇಶಕ ತಮ್ಮೇಗೌಡ, ಚಾಂದ್ ಪಾಷ, ಇಮ್ತಿಯಾಜ್, ಅರುಣ್ ಕುಮಾರ್, ಮಾದಿಗ ದಂಡೋರ ಅಧ್ಯಕ್ಷ ಸುಬ್ಬರಾಜು, ಕೇಂದ್ರ ಕಾರ್ಮಿಕ ಭವಿಷ್ಯ ನಿಧಿ ನಿರ್ದೇಶಕ ವಿಜಯ್ ಕುಮಾರ್, ಬಿ.ವಿ.ಬೈರೇಗೌಡ, ಯುವ ಮುಖಂಡ ಬಿ.ಜಿ.ನಾರಾಯಣಗೌಡ ಹಾಗೂ ತಾಲ್ಲೂಕಿನ ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.