ADVERTISEMENT

ದೊಡ್ಡಬಳ್ಳಾಪುರ: ರಾಜಕಾಲುವೆ ಸೇರುತ್ತಿರುವ ಕಲ್ಲು ಬಂಡೆಗಳು: ದೂರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 3:44 IST
Last Updated 1 ನವೆಂಬರ್ 2021, 3:44 IST
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದ ಸಮೀಪ ಮಳೆ ನೀರು ಹರಿದು ಹೋಗುವ ಕಾಲುವೆಗಳಿಗೆ ರಾಶಿ ಹಾಕಿರುವ ಕಲ್ಲು ಬಂಡೆಗಳು
ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದ ಸಮೀಪ ಮಳೆ ನೀರು ಹರಿದು ಹೋಗುವ ಕಾಲುವೆಗಳಿಗೆ ರಾಶಿ ಹಾಕಿರುವ ಕಲ್ಲು ಬಂಡೆಗಳು   

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡ ತುಮಕೂರು ಸುತ್ತಮುತ್ತ ನಿರ್ಮಾಣವಾಗುತ್ತಿರುವ ಲೇಔಟ್‌ಗಳಲ್ಲಿನ ಕಲ್ಲು ಬಂಡೆಗಳನ್ನು ಮಳೆ ನೀರು ಹರಿದು ಹೋಗುವ ರಾಜಕಾಲುವೆಗಳಿಗೆ ತಂದು ತುಂಬುತ್ತಿದ್ದಾರೆ. ಇದರಿಂದ ಮಳೆ ನೀರು ಕೆರೆಗಳಿಗೆ ಹರಿದು ಬರಲು ಅಡ್ಡಿಯಾಗಿದೆ ಎಂದು ದೊಡ್ಡತುಮಕೂರು ಗ್ರಾಮದ ನಿವಾಸಿ ಟಿ.ಕೆ. ವಸಂತ್‌ಕುಮಾರ್‌ ದೂರಿದ್ದಾರೆ.

ಅವರು ಈ ಬಗ್ಗೆ ಮಾಹಿತಿ ನೀಡಿ, ಲೇಔಟ್‌ಗಳ ನಿರ್ಮಾಣದ ಸಂದರ್ಭದಲ್ಲಿ ನಿವೇಶನಗಳ ವಿಗಂಡೆಯಲ್ಲಿ ಅಡ್ಡಿಯಾಗುವ ಬಂಡೆಗಳನ್ನು ಎಲ್ಲೆಂದರಲ್ಲಿ ತಂದು ರಾಶಿ ಹಾಕಿ ಮಳೆ ನೀರು ಹರಿದು ಹೋಗುವ ರಾಜಕಾಲುವೆ, ಹಳ್ಳಗಳಲ್ಲಿ ರಾಶಿ ಹಾಕುವುದರಿಂದ ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿ ನೀರು ರಸ್ತೆ, ರೈತರ ಹೊಲಗಳಿಗೆ ನುಗ್ಗುವಂತಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸಹ ಸೂಕ್ತ ಕ್ರಮವಹಿಸಿಲ್ಲ ಎಂದು ಅವರುದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT