ADVERTISEMENT

ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾದ ಸಭೆ 25ರಂದು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:32 IST
Last Updated 6 ಡಿಸೆಂಬರ್ 2022, 5:32 IST
ದೇವನಹಳ್ಳಿಯ ಎಸ್‌ಬಿಐ ಪ್ರಾದೇಶಿಕ ವ್ಯಾವಹಾರಿಕ ಕೇಂದ್ರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಮೊತ್ತದ ಕೃಷಿ ಸಾಲ ಸೌಲಭ್ಯ ಕುರಿತು ನಡೆದ ಆರ್ಥಿಕ ಸಾಕ್ಷರತಾ ಸಭೆಯಲ್ಲಿ ರೈತರು, ಅಧಿಕಾರಿಗಳು ಪಾಲ್ಗೊಂಡಿದ್ದರು
ದೇವನಹಳ್ಳಿಯ ಎಸ್‌ಬಿಐ ಪ್ರಾದೇಶಿಕ ವ್ಯಾವಹಾರಿಕ ಕೇಂದ್ರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಮೊತ್ತದ ಕೃಷಿ ಸಾಲ ಸೌಲಭ್ಯ ಕುರಿತು ನಡೆದ ಆರ್ಥಿಕ ಸಾಕ್ಷರತಾ ಸಭೆಯಲ್ಲಿ ರೈತರು, ಅಧಿಕಾರಿಗಳು ಪಾಲ್ಗೊಂಡಿದ್ದರು   

ಹೊಸಕೋಟೆ: ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾದ 2021-2022ನೇ ಸಾಲಿನ ಸರ್ವ ಸದಸ್ಯರ ಸಭೆಯು ಡಿ. 25ರಂದು ಬೆಳಿಗ್ಗೆ 10.30ಗಂಟೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ಮಹಾಸಭಾದ ಪ್ರಾರ್ಥನಾ ಮಂದಿರದಲ್ಲಿ ಬಿ.ವಿ. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವರದಿ ಪುಸ್ತಕವನ್ನು ಕಾರ್ಯಾಲಯದಲ್ಲಿ ಡಿ. 15ರಿಂದ ಪಡೆಯಬಹುದು. ಸಭೆಗೆ ಸದಸ್ಯರಿಗೆ ಮಾತ್ರ ಪ್ರವೇಶವನ್ನು ಸೀಮಿತಗೊಳಿಸಲಾಗಿದೆ. ಸದಸ್ಯರಿಗೆ ಬೆಳಿಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನ ಏರ್ಪಡಿಸಲಾಗಿದೆ. ಅಂದು ನಗರ ಮತ್ತು ಗ್ರಾಮಾಂತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸದಸ್ಯರು ಸಕಾಲಕ್ಕೆ ಆಗಮಿಸಿ ಕಾರ್ಯ ಕಲಾಪದಲ್ಲಿ ಭಾಗವಹಿಸಬೇಕು ಎಂದು ಸಂಘದ ಗೌರವ ಕಾರ್ಯದರ್ಶಿ ವೈ.ಜಿ. ಮುರಳೀಧರ್‌ ತಿಳಿಸಿದ್ದಾರೆ.

ಪ್ರತಿಭಾ ಪುರಸ್ಕಾರ ಅರ್ಜಿಯನ್ನು ಮಹಾಸಭಾದ ಕಚೇರಿ ಅಥವಾ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಅಂಚೆ ಮೂಲಕ ಸಂಘದ ಕಚೇರಿಗೆ ಕಳುಹಿಸಬಹುದು.

ADVERTISEMENT

ಹೆಚ್ಚಿನ ಮಾಹಿತಿಗೆ ಕಾರ್ಯಾಲಯದ ಕಚೇರಿ, ದೂರವಾಣಿ ಸಂಖ್ಯೆ 080–43745776 (www.uluchukamme.org), ಮೊಬೈಲ್98801 09696, 94488 02178 ಸಂಪರ್ಕಿಸ
ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.