ADVERTISEMENT

ಖಾನಾಪುರ: ಮತ್ತೊಂದು ಕಾಡುಕೋಣ ಸಾವು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 9:21 IST
Last Updated 17 ಮಾರ್ಚ್ 2020, 9:21 IST
ಖಾನಾಪುರ ತಾಲ್ಲೂಕಿನ ಹರೂರಿ ಬಳಿ ರೈಲು ಹಳಿ ಬಳಿ ಬಿದ್ದಿದ್ದ ಕಾಡುಕೋಣದ ಕಳೇಬರ
ಖಾನಾಪುರ ತಾಲ್ಲೂಕಿನ ಹರೂರಿ ಬಳಿ ರೈಲು ಹಳಿ ಬಳಿ ಬಿದ್ದಿದ್ದ ಕಾಡುಕೋಣದ ಕಳೇಬರ   

ಖಾನಾಪುರ: ತಾಲ್ಲೂಕಿನ ಹರೂರಿ ಗ್ರಾಮದ ಬಳಿಯ ಬೆಳಗಾವಿ-ಲೋಂಡಾ ರೈಲು ಅಪ್ಪಳಿಸಿದ ಪರಿಣಾಮ ಕಾಡುಕೋಣ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಫೆಬ್ರುವರಿ24 ಮತ್ತು ಮಾರ್ಚ್‌ 10ರಂದು ಇದೇ ರೈಲು ಮಾರ್ಗದಲ್ಲಿ ಒಟ್ಟು ಮೂರು ಕಾಡುಕೋಣಗಳು ಸಾವಿಗೀಡಾಗಿದ್ದವು. ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ಕಾಡುಕೋಣ ಬಲಿಯಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮರಣೋತ್ತರ ಪರೀಕ್ಷೆ ಕೈಗೊಂಡರು. ಬಳಿಕ ಹರೂರಿ ಅರಣ್ಯದಲ್ಲಿ ಕಳೆಬರದ ಅಂತ್ಯಕ್ರಿಯೆ ನಡೆಸಲಾಗಿದೆ. ಲೋಂಡಾ ವಲಯ ಅರಣ್ಯ ಅಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆರ್‌ಎಫ್‌ಒ ಪ್ರಶಾಂತ ಗೌರಾಣಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.