ADVERTISEMENT

ಬೈಲಹೊಂಗಲ | ಸಕ್ಕರೆ ಕಾರ್ಖಾನೆ ಚುನಾವಣೆ: 62 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 6:55 IST
Last Updated 2 ಸೆಪ್ಟೆಂಬರ್ 2023, 6:55 IST
ಬೈಲಹೊಂಗಲ ಸೋಮೇಶ್ವರ ಸಕ್ಕರೆ ಕಾರ್ಖಾನೆಗೆ ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಅಮೃತ ದೇಸಾಯಿ ನೇತೃತ್ವದಲ್ಲಿ ಅನಿತಾ ಮೆಟಗುಡ್ಡ ನಾಮಪತ್ರ ಸಲ್ಲಿಸಿದರು. ಗುರು ಮೆಟಗುಡ್ಡ, ಸ್ನೇಹಲತಾ ಮೆಟಗುಡ್ಡ ಇದ್ದಾರೆ
ಬೈಲಹೊಂಗಲ ಸೋಮೇಶ್ವರ ಸಕ್ಕರೆ ಕಾರ್ಖಾನೆಗೆ ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಅಮೃತ ದೇಸಾಯಿ ನೇತೃತ್ವದಲ್ಲಿ ಅನಿತಾ ಮೆಟಗುಡ್ಡ ನಾಮಪತ್ರ ಸಲ್ಲಿಸಿದರು. ಗುರು ಮೆಟಗುಡ್ಡ, ಸ್ನೇಹಲತಾ ಮೆಟಗುಡ್ಡ ಇದ್ದಾರೆ   

ಬೈಲಹೊಂಗಲ: ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಸೆ.10ರಂದು ನಡೆಯಲಿರುವ ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ಇಲ್ಲಿಯವರೆಗೆ 62 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಮನಿ ಎಂ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಖಾನೆ ನಿವೇಶನದಲ್ಲಿ ಶುಕ್ರವಾರ ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ, ಅಮೃತ ದೇಸಾಯಿ ಅವರ ನೇತೃತ್ವದ ಸೋಮೇಶ್ವರ ರೈತ ಅಭಿವೃದ್ಧಿ ಬಣದ ಅಭ್ಯರ್ಥಿಗಳಾದ ಉಮೇಶ ಬಾಳಿ, ಸಂಗನಗೌಡ ರಾಮನಗೌಡರ, ಬಸವರಾಜ ಮೊಖಾಶಿ, ಸಿದ್ದನಗೌಡ ಪಾಟೀಲ, ಮಹಾಂತೇಶ ಹರಕುಣಿ, ಫಕೀರಪ್ಪ ಜಾಂಗಟೆ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಬಸಪ್ಪ ಬೋಳಗೌಡರ, ಕಸ್ತೂರಿ ಸೋಮನಟ್ಟಿ, ಬಸವರಾಜ ಪರವನ್ನವರ, ಪಾರೀಶಪ್ಪ ಬಾಂವಿ, ಪ್ರಕಾಶ ಮೂಗಬಸವ, ಅನಿತಾ ಮೆಟಗುಡ್ಡ, ಶ್ರೀಶೈಲಪ್ಪ ಶರಣಪ್ಪನವರ, ಮಲ್ಲಯ್ಯ ರುದ್ರಾಪೂರ, ರಾಚಪ್ಪ ಮಟ್ಟಿ, ರಾಜಶೇಖರ ಎತ್ತಿನಮನಿ, ಅಶೋಕ ಯರಗೋಪ್ಪ, ಬಸನಾಯ್ಕ ಮಲ್ಲೂರ, ಅನ್ನಪೂರ್ಣಾ ನಿರ್ವಾಣಿ, ಮಹಾಂತೇಶ ಹಿತ್ತಲಗಡ್ಡಿ, ಮಹಾಂತೇಶ ಹೊಸಮನಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಇಂದು (ಶನಿವಾರ) ಕೊನೆಯ ದಿನವಾಗಿದೆ.

ADVERTISEMENT

ಜಯರಾಜ ಮೆಟಗುಡ್ಡ, ಕುಮಾರಗೌಡ ಪಾಟೀಲ, ವೀರನಗೌಡ ಸಂಗನ್ನವರ, ಗುರುಪಾದ ಕಳ್ಳಿ, ಎಫ್.ಎಸ್. ಸಿದ್ದನಗೌಡರ, ರೈತ ಬಾಂಧವರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.