ADVERTISEMENT

ಬಿಜೆಪಿಗೆ ಈಗ ಯಡಿಯೂರಪ್ಪ ನೆನಪಾಗಿದೆ: ಶಾಸಕ ವಿನಯ ಕುಲಕರ್ಣಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 15:36 IST
Last Updated 20 ಆಗಸ್ಟ್ 2023, 15:36 IST
ಶಾಸಕ ವಿನಯ ಕುಲಕರ್ಣಿ
ಶಾಸಕ ವಿನಯ ಕುಲಕರ್ಣಿ   

ಚನ್ನಮ್ಮನ ಕಿತ್ತೂರು: ‘ಯಡಿಯೂರಪ್ಪ ಇಲ್ಲದೆ ಹಾಳಾಗಿ ಹೋದೆವು ಎನ್ನುವುದು  ಈಗ ಬಿಜೆಪಿಗೆ ನೆನಪಾಗಿದೆ. ಹೀಗಾಗಿ ಅವರ ನೇತೃತ್ವದಲ್ಲಿ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಬೇಕೆಂಬ ಮಾತುಗಳು ಪಕ್ಷದ ನಾಯಕರಿಂದ ಕೇಳಿಬರುತ್ತಿವೆ’ ಎಂದು ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಕುಟುಕಿದರು.

ಭಾನುವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸಿದರು. ಚುನಾವಣೆ ಸಂದರ್ಭ ಹೊರತುಪಡಿಸಿದರೆ, ಅವರನ್ನು ಮೂಲೆಗುಂಪು ಮಾಡಿದರು. ಈಗ ಯಡಿಯೂರಪ್ಪ ತೆಗೆದುಕೊಂಡು ಏನು ಮಾಡುವವರಿದ್ದಾರೆ?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT