ADVERTISEMENT

ಮೈತುಂಬಿ ಹರಿಯುತ್ತಿದೆ ಮಾರ್ಕಂಡೇಯ ನದಿ; ಮಠದಲ್ಲಿ ಸಿಲುಕಿದ್ದ 15 ಜನರ ರಕ್ಷಣೆ

ಬೆಳಗಾವಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 10:47 IST
Last Updated 4 ಆಗಸ್ಟ್ 2019, 10:47 IST
   

ಬೆಳಗಾವಿ: ಮಾರ್ಕಂಡೇಯ ನದಿ ಅಬ್ಬರಕ್ಕೆ ಗೋಕಾಕ ತಾಲ್ಲೂಕು ಕುಂದರಗಿಯ ಸುಪ್ರಸಿದ್ಧ ಕುಂದರಗಿ ಅಡವಿಸಿದ್ದೇಶ್ವರ ಮಠ ಜಲಾವೃತವಾಗಿದೆ.

ಗೋಕಾಕ ತಾಲ್ಲೂಕು ಆಡಳಿತ ಪ್ರವಾಹ ಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ಮಠದಲ್ಲಿದ್ದ 15 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಂದಿದೆ.

ವಿಪತ್ತು ನಿರ್ವಹಣಾ ತಂಡವು ಬೋಟ್ ಮೂಲಕ ತೆರಳಿ ಮಠದಲ್ಲಿದ್ದ ಸಿಬ್ಬಂದಿ ಹಾಗೂ ಅರ್ಚಕರನ್ನು ಸುರಕ್ಷಿತ ಪ್ರದೇಶಕ್ಕೆ ಕರೆ ತಂದಿತು.ವಾರದಿಂದ ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ADVERTISEMENT

ಲೋಂಡಾ–ಗೋವಾ ರೈಲು ಸ್ಥಗಿತ

ಖಾನಾಪುರ ತಾಲ್ಲೂಕಿನಲ್ಲೂಭಾರಿ ಮಳೆಯಾಗಿದ್ದು,ಲೋಂಡಾ ಸಮೀಪದಲ್ಲಿ ರೈಲು ಹಳಿ ಕೆಳಗಿನ ಮಣ್ಣಿ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿದೆ. ಲೋಂಡಾ–ಗೋವಾ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.