ADVERTISEMENT

ಕಳವು: ಇಬ್ಬರ ಬಂಧನ– ಚಿನ್ನಾಭರಣ, ನಗದು ವಶ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 4:09 IST
Last Updated 4 ಅಕ್ಟೋಬರ್ 2022, 4:09 IST
ನಂದಗಡ ಹಾಗೂ ಖಾನಾಪುರ ಠಾಣೆಗಳ ವ್ಯಾಪ್ತಿಯಲ್ಲಿ ವಿವಿಧೆಡೆ ಕಳವು ಮಾಡಿದ ಪ್ರಕರಣ
ನಂದಗಡ ಹಾಗೂ ಖಾನಾಪುರ ಠಾಣೆಗಳ ವ್ಯಾಪ್ತಿಯಲ್ಲಿ ವಿವಿಧೆಡೆ ಕಳವು ಮಾಡಿದ ಪ್ರಕರಣ   

ಬೆಳಗಾವಿ: ಜಿಲ್ಲೆಯ ನಂದಗಡ ಹಾಗೂ ಖಾನಾಪುರ ಠಾಣೆಗಳ ವ್ಯಾಪ್ತಿಯಲ್ಲಿ ವಿವಿಧೆಡೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಂಗಳವಾರ ಬಂಧಿಸಿರುವ ಪೊಲೀಸರು, ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಗದಗ ಜಿಲ್ಲೆಯ ಬಿಸಿಕೇರಿಯ ನಿವಾಸಿ ದುರ್ಗಪ್ಪ ಹಾಗೂ ಅಳ್ನಾವರ ನಿವಾಸಿ ಯಲ್ಲಪ್ಪ ಬಂಧಿತರು.

ಇವರ ಬಳಿ 57 ಗ್ರಾಂ ಬಂಗಾರದ ಆಭರಣಗಳು, 310 ಗ್ರಾಂ ಬೆಳ್ಳಿ ಆಭರಣಗಳು, ₹55 ಸಾವಿರ ನಗದ, ಕಳ್ಳತನಕ್ಕೆ ಬಳಸಿದ ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ನಂದಗಡ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.