ADVERTISEMENT

ಗಮನ ಸೆಳೆದ ಚಕ್ಕಡಿ ಜಾಥಾ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 16:06 IST
Last Updated 14 ಆಗಸ್ಟ್ 2022, 16:06 IST
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಾಗರಮುನ್ನೋಳಿಯಲ್ಲಿ ಭಾನುವಾರ ಆಯೋಜಿಸಿದ್ದ ಚಕ್ಕಡಿ ಜಾಥಾಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಾಗರಮುನ್ನೋಳಿಯಲ್ಲಿ ಭಾನುವಾರ ಆಯೋಜಿಸಿದ್ದ ಚಕ್ಕಡಿ ಜಾಥಾಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು   

ನಾಗರಮುನ್ನೋಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ರೈತ ಮೋರ್ಚಾ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ವತಿಯಿಂದ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಚಕ್ಕಡಿ ಜಾಥಾ ಗಮನ ಸೆಳೆಯಿತು.

ಆದಿ ಜಾಂಬವ ನಿಗಮದ ಅಧ್ಯಕ್ಷರೂ ಆದ ಶಾಸಕ ಡಿ.ಎಂ.ಐಹೊಳೆ ಜಾಥಾಗೆ ಚಾಲನೆ ನೀಡಿದರು. ‘ದೇಶದ ಪ್ರತಿ ಹಳ್ಳಿಗೂ, ಪ್ರತಿ ಮನೆಗೂ ಸ್ವಾತಂತ್ರ್ಯ ಸಂಭ್ರಮ ಮುಟ್ಟಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದಾರೆ. ಇದರ ಭಾಗವಾಗಿ ರೈತರು ಎತ್ತಿನಗಾಡಿ ಜಾಥಾ ಹಮ್ಮಿಕೊಂಡಿದ್ದು ಪ್ರಶಂಸಾರ್ಹ’ ಎಂದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಭೆಂಡವಾಡೆ, ರಾಯಬಾಗ ಮಂಡಲ ಘಟಕದ ಅಧ್ಯಕ್ಷ ಬಸವರಾಜ ಡೋಣವಾಡೆ, ರಮೇಶ ಕಾಳಣ್ಣವರ, ವಿ.ಬಿ.ಈಟಿ, ಲಕ್ಷ್ಮಣ ಪೂಜೇರಿ, ಮುರಿಗೆಪ್ಪ ಅಡಿಶೇರಿ, ಎಂ.ಎಸ್.ಈಟಿ, ಅರುಣ ಮರ್ಯಾಯಿ, ನಿಜಾಮ್ ಫೆಂಡಾರಿ, ಲಾಡಜಿ ಮುಲ್ತಾನಿ, ಡಿ.ಆರ್. ಕೋಟೆಪಗೋಳ, ದೇವರಾಜ ಪಶ್ಚಾಪುರೆ, ಮಲ್ಲಪ್ಪ ಟೋನಪೆ, ಸದಾಶಿವ ಘೋರ್ಪಡೆ, ರಾಮಪ್ಪ ಹಾಲಟ್ಟಿ, ಅನಿಲ ಕರೋಶಿ, ಸದಾಶಿವ ಹಳಿಗಂಳಿ, ಮನೋಜ ಮನಗೂಳಿ, ರಾಜು ಹಗರಣ್ಣವರ, ಸಂದೀಪ ಮೊರೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.