ADVERTISEMENT

ಗೋಕಾಕ: ಹೃದಯಾಘಾತದಿಂದ ಬಸ್‌ ಚಾಲಕ ಸಾವು, ಪ್ರಯಾಣಿಕರು ಪಾರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 15:40 IST
Last Updated 28 ಫೆಬ್ರುವರಿ 2023, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗೋಕಾಕ: ಇಲ್ಲಿನ ಗೋಕಾಕ ಫಾಲ್ಸ್‌ ಮಾರ್ಗದ ಇಳಿಜಾರಿನಲ್ಲಿ ಮಂಗಳವಾರ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ ಚಾಲಕನಿಗೆ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಆದರೆ, ಅವರ ಸಮಯ ಪ್ರಜ್ಞೆಯಿಂದ ನಾಲ್ವರು ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.

ತಾಲ್ಲೂಕಿನ ಮೇಲ್ಮಟ್ಟಿ ಗ್ರಾಮದ ನಿವಾಸಿ ಮಂಜು ವೀರಪ್ಪ ಅಂಕಲಗಿ (43) ಮೃತಪಟ್ಟವರು. ಬಸ್‌ ಸಂಚರಿಸುವಾಗಲೇ ಅವರಿಗೆ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರು ಬಸ್‌ಅನ್ನು ರಸ್ತೆ ಪಕ್ಕಕ್ಕೆ ತಂದು ನಿಲ್ಲಿಸಿದರು. ಕಂಡಕ್ಟರ್‌ ಹಾಗೂ ಪ್ರಯಾಣಿಕರ ನೆರವಿನಿಂದ ಇನ್ನೊಂದು ವಾಹನದಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರೊಳಗೆ ಪ್ರಾಣ ಬಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

‘ಮಂಜು ಅವರು ತಮ್ಮ ಪ್ರಾಣ ಬಿಟ್ಟರೂ ಇಳಿಜಾರಿನಲ್ಲಿ ಬಸ್‌ ಅಪಘಾತವಾಗದಂತೆ ಮಾಡಿ, ನಮ್ಮ ಪ್ರಾಣ ಕಾಪಾಡಿದರು’ ಪ್ರಯಾಣಿಕ ಶಿವಾನಂದ ಯದ್ದಲಗುಡ್ಡ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.