ಕಾಗವಾಡ: ‘ಸಾರಿಗೆ ಇಲಾಖೆ ನಷ್ಟದಲ್ಲಿದೆ, ಡಿಸೇಲ್, ಬಸ್ ಬಿಡಿ ಭಾಗಗಳ ದರ ಹೆಚ್ಚಳ ಆಗಿರುವುದರಿಂದ ಬಸ್ ಟಿಕೇಟ್ ದರ ಹೆಚ್ಚಳ ಅನಿವಾರ್ಯ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಪತ್ರಕರ್ತರರೊಂದಿಗೆ ಮಾತನಾಡಿದ ಅವರು, ಡಿಸೇಲ್ ವಾಹನಗಳ ಬಿಡಿ ಭಾಗಗಳ ದರ ಹೆಚ್ಚಳ, ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಕಳೆದ 4 ವರ್ಷಗಳಿಂದ ಬಸ್ ಟಿಕೇಟ್ ದರ ಹೆಚ್ಚಳವಾಗಿಲ್ಲ, ದರ ಹೆಚ್ಚಳ ಮಾಡುವುದರ ಬಗ್ಗೆ ಚಿಂತನೆ ನಡೆದಿದೆ ಇನ್ನು ನಿರ್ಣಯ ಕೈಗೊಂಡಿಲ್ಲ ಎಂದರು.
‘ಶಕ್ತಿ ಯೋಜನೆಯಿಂದ ಆದಾಯ ಬರುತ್ತಿದೆ. 400 ಬಸ್ಸುಗಳನ್ನು ಹೆಚ್ಚಿಗೆ ಖರೀದಿಸಲಾಗಿದೆ. ಹಳೆಯ ಬಸ್ಗಳನ್ನು ಮಾರಾಟ ಮಾಡಲಾಗುತ್ತಿದೆ, ಈಗ ಹೊಸದಾಗಿ 10 ಬಸ್ಗಳು ಬಂದಿದ್ದು, ಅವುಗಳ ಪ್ರಾಯೋಗಿಕ ಚಾಲನೆ ನಡೆದಿದೆ. ವಾರದೊಳಗೆ 400 ಬಸ್ಗಳು ವಾಯುವ್ಯ ಕರ್ನಾಟಕ ಸಂಸ್ಥೆಗೆ ಬರುತ್ತವೆ. ನಂತರ ಅಥಣಿ, ಕಾಗವಾಡ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟ ಹೀಗೆ ಅವಶ್ಯಕತೆಗೆ ಅನುಗುಣವಾಗಿ ಹಂಚಿಕೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು’ ಎಂದು ರಾಜು ಕಾಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.