
ಯರಗಟ್ಟಿ: ಮತ ಕ್ಷೇತ್ರದ ಸಮಗ್ರ ಅಭಿದ್ಧಿಯೇ ನನ್ನ ಗುರಿ ಎಂದು ಸವದತ್ತಿ ಶಾಸಕ
ವಿಶ್ವಾಸ್ ವೈದ್ಯ ಹೇಳಿದರು.
ಸಮೀಪದ ಕುರಬಗಟ್ಟಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ‘ಕುಡಿಯುವ ನೀರು, ನೀರಾವರಿ, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲ ಮೂಲಸೌಲಭ್ಯಗಳನ್ನು ಅನಿಷ್ಠಾನಗೊಳಿಸುವ ನಿಟ್ಟನಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ’ ಎಂದರು.
ಯರಗಟ್ಟಿ ಭಾಗದ ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ ಮಾತನಾಡಿದರು.
ಮಾಡಮಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಕನ ಸನ್ನಲಿಂಗನ್ನವರ, ಅಜೀತಕುಮಾರ ದೇಸಾಯಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದ್ದಬಸವನ್ನವರ, ಮಹೇಶ ಜಂಭ್ರಿ, ಯರಗಟ್ಟಿ ಮಠದ ಗಣಪತಿ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಾಯಪ್ಪ ಹುಂರೆಕಾರ, ವಿಠ್ಠಲ್ ಬಂಟನೂರ, ಮಲಿಕಸಾಬ್ ಬಾಗವಾನ, ಮಾದೇವ ಖಂಡ್ರಿ, ಬಾಳೇಶ ಕೌಜಲಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.