ಬೆಳಗಾವಿ: ‘ಮೂವತ್ತು ವರ್ಷಗಳಿಂದ ಅವರ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೆ. 10ರಂದು ನಾನೇ ಸಾಂಬ್ರಾ ವಿಮಾನನಿಲ್ದಾಣಕ್ಕೆ ಹೋಗಿ ಅವರನ್ನು ಬಿಟ್ಟು ಬಂದಿದ್ದೆ. ಆದರೆ ಅವರು ವಾಪಸ್ ಬರಲೇ ಇಲ್ಲ...’
– ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಾರ್ ಚಾಲಕರಾಗಿದ್ದ ಮುದಕಪ್ಪ ನಾಯಕ ಅವರ ಪ್ರತಿಕ್ರಿಯೆ ನೀಡಿದ್ದು ಹೀಗೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದೆಹಲಿಗೆ ಹೋದ ತಕ್ಷಣವೇ ಫೋನ್ ಮಾಡಿ ಹುಷಾರಾಗಿರುವಂತೆ ನನಗೆ ಸಲಹೆ ನೀಡಿದ್ದರು. ಎಂದಿಗೂ ನನ್ನನ್ನು ಕೆಲಸದವನು ಎಂದು ಅವರು ಭಾವಿಸಿರಲಿಲ್ಲ. ಕುಟುಂಬದವರಂತೆ ಕಾಣುತ್ತಿದ್ದರು. ಅವರ ಹಠಾತ್ ನಿಧನ ನೋವು ತಂದಿದೆ’ ಎಂದು ಕಣ್ಣೀರಿಟ್ಟರು.
‘ಜನಸಾಮಾನ್ಯರಿರಲಿ, ಯಾರೇ ಇರಲಿ ಸಮಸ್ಯೆ ಹೇಳಿಕೊಂಡರೆ ಕೂಡಲೇ ಸ್ಪಂದಿಸುತ್ತಿದ್ದರು’ಎಂದು ನೆನದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.