
ಮುಗಳಿಹಾಳ: ‘ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ಪ್ರತಿಭೆ ಅಡಗಿದೆ. ಇಂಥ ಕ್ರೀಡಾಕೂಟಗಳ ಮೂಲಕ ಅದು ಹೊರಹೊಮ್ಮಬೇಕು’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಮುಗಳಿಹಾಳ ಕ್ರಿಕೆಟ್ ಟೀಮ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕಾಶ ವಾಲಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಬಸು ಸತ್ತೂರಿ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಆರ್.ಕೆ.ಪಟಾತ್, ರಾಮಣ್ಣ ದಳವಾಯಿ , ದುರಗಪ್ಪ ದಳವಾಯಿ, ಗ್ರಾ.ಪಂ ಅಧ್ಯಕ್ಷ ಲಕ್ಕಪ್ಪ ಸಣ್ಣಲಿಂಗನವರ, ವಿಠ್ಠಲ ದಳವಾಯಿ, ಹಣಮಂತ ದಳವಾಯಿ, ರುಕ್ಮವ್ವ ಕೊಪ್ಪದ, ಪದ್ಮಾವತಿ ಮುರಗಟ್ಟಿ, ಯಲ್ಲಪ್ಪ ನರಿ, ಪಡೆಪ್ಪ ನರಿ, ಕೃಷ್ಣಾ ಮುರಗೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.