ADVERTISEMENT

ಮಾಳಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 11:16 IST
Last Updated 19 ಡಿಸೆಂಬರ್ 2020, 11:16 IST
ಅಥಣಿಯ ರಾಮಲಿಂಗೇಶ್ವರ ದೇವಾಲಯದ ಕಾರ್ಯಾಲಯದಲ್ಲಿ ಮಾಳಿ (ಮಾಲಗಾರ) ಸಮಾಜದ ಮುಖಂಡರ ಸಭೆ ನಡೆಯಿತು
ಅಥಣಿಯ ರಾಮಲಿಂಗೇಶ್ವರ ದೇವಾಲಯದ ಕಾರ್ಯಾಲಯದಲ್ಲಿ ಮಾಳಿ (ಮಾಲಗಾರ) ಸಮಾಜದ ಮುಖಂಡರ ಸಭೆ ನಡೆಯಿತು   

ಅಥಣಿ: ‘ಕೃಷಿ ಹಾಗೂ ತರಕಾರಿ ಮಾರುವ ಕಾಯಕದಲ್ಲಿ ತೊಡಗಿರುವ ಹಿಂದುಳಿದ ಮಾಳಿ (ಮಾಲಗಾರ) ಸಮಾಜಕ್ಕೆ ಅಭಿವೃದ್ಧಿ ನಿಗಮ ರಚಿಸಬೇಕು’ ಎಂದು ಮುಖಂಡ ಸಂತೋಷ ಬಡಕಂಬಿ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದ ಜನಸಂಖ್ಯೆ 40 ಲಕ್ಷಕ್ಕೂ ಜಾಸ್ತಿ ಇದೆ. ಇಂದಿಗೂ ಕೃಷಿಯನ್ನು ಮೂಲಕಸುಬನ್ನಾಗಿ ಆಧರಿಸಿ ಜೀವನ ಸಾಗಿಸುತ್ತಿದ್ದೇವೆ. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ್ದಿದ್ದೇವೆ. ಹೀಗಾಗಿ, ಪ್ರತ್ಯೇಕ ನಿಗಮ ಸ್ಥಾಪಿಸಿ ಅನುದಾನ ಒದಗಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿಗೆ ಬೇಡಿಕೆ ಬಗ್ಗೆ ಗಮನಕ್ಕೆ ತರುವುದಕ್ಕಾಗಿ ಜ.3ರಂದು ಆಚರಿಸಲಾಗುವ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಂದಯ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಪತ್ರ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಸಮಾಜದವರು ಪಾಲ್ಗೊಳ್ಳಬೇಕು’ ಎಂದು ಕೋರಿದರು.

ADVERTISEMENT

ಮುಖಂಡ ಶ್ರೀಶೈಲ ಹಳ್ಳದಮಳ, ‘ಸಮಾಜದವರು ಆಂದೋಲನದಲ್ಲಿ ಭಾಗವಹಿಸಬೇಕು’ ಎಂದರು.

ಮುಖಂಡರಾದ ಮಹಾಂತೇಶ ಮಾಳಿ, ನಾಗಪ್ಪ ಉಗಾರೆ, ರವಿ ಬಡಕಂಬಿ, ಮಹಾದೇವ ಚಮಕೇರಿ, ಸದಾಶಿವ ಲಗಳಿ, ಪ್ರಶಾಂತ ತೋಡಕರ, ರಮೇಶ ಮಾಳಿ, ಶ್ರೀಶೈಲ ಬಡಕಂಬಿ, ತ್ರಿಮೂರ್ತಿ ಶೇಡಬಾಳ, ಅನೀಲ ತೆವರಟ್ಟಿ, ಶಂಕರ ಬಡಕಂಬಿ, ಬಸವರಾಜ ಹಳ್ಳದಮಳ, ಮುರುಗೇಶ ಮೋಳೆ, ಬಸವರಾಜ ಬಡಕಂಬಿ, ಸಂತೋಷ ಕಿವಡಿ, ಚೇತನ ಮಾಳಿ, ಶ್ರೀಕಾಂತ ಬಡಕಂಬಿ, ಮುರುಗೇಶ ಶೇಡಬಾಳೆ, ಶ್ರೀಶೈಲ ಕಿವಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.