ADVERTISEMENT

ರಾಮಕೃಷ್ಣ ಮಿಷನ್‌ನಿಂದ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2019, 14:46 IST
Last Updated 11 ಮೇ 2019, 14:46 IST
ಬೆಳಗಾವಿಯ ಶ್ರೀರಾಮಕೃಷ್ಣ ಆಶ್ರಮದಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಯಿತು
ಬೆಳಗಾವಿಯ ಶ್ರೀರಾಮಕೃಷ್ಣ ಆಶ್ರಮದಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಯಿತು   

ಬೆಳಗಾವಿ: ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರಿಗೆ ನೆರವಾಗಲು ಇಲ್ಲಿನ ಶ್ರೀರಾಮಕೃಷ್ಣ ಮಿಷನ್ ಆಶ್ರಮ ಮುಂದಾಗಿದೆ.

ಮಿಷನ್‌ನ ‘ಬರ ಪರಿಹಾರ ಕಾರ್ಯಕ್ರಮ’ದಲ್ಲಿ ಮೊದಲ ಹಂತದಲ್ಲಿ ಅಥಣಿ ತಾಲ್ಲೂಕಿನ ಸಂಬರಗಿ, ಜಂಬಗಿ, ಶಿರೂರ, ಅಜೂರ, ಅನಂತಪುರ ಹಾಗೂ ಪಡೇಗಾಂವ ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗಿದೆ. ಮತ್ತಷ್ಟು ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಸಿ ಅಲ್ಲಿನ ಜನರಿಗೆ ಸ್ಪಂದಿಸಲು ಆಶ್ರಮ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT