ADVERTISEMENT

‘ಒಂದಿಬ್ಬರು ಶಾಸಕರ ರಾಜೀನಾಮೆಯಿಂದ ಏನೂ ಆಗಲ್ಲ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 12:57 IST
Last Updated 1 ಜುಲೈ 2019, 12:57 IST
   

ಬೆಳಗಾವಿ: ‘ಒಂದಿಬ್ಬರಾಗಲೀ, ಮೂರ್ನಾಲ್ಕು ಶಾಸಕರಾಗಲಿ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಪತನವಾಗಲು ಕನಿಷ್ಠ 15 ಶಾಸಕರ ರಾಜೀನಾಮೆ ನೀಡಬೇಕು. ಆದರೆ, ಅಷ್ಟೊಂದು ಪ್ರಮಾಣದಲ್ಲಿ ಶಾಸಕರಾರೂ ರಾಜೀನಾಮೆ ನೀಡಿಲ್ಲ. ಸರ್ಕಾರ ಸುಭದ್ರವಾಗಿದೆ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವು 5 ವರ್ಷಕ್ಕಾಗಿ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಈಗ ಒಂದು ವರ್ಷ ಪೂರ್ಣಗೊಂಡಿದ್ದು, ಇನ್ನುಳಿದ ಕಾಲಾವಧಿಯನ್ನೂ ಸರ್ಕಾರ ಪೂರ್ಣಗೊಳಿಸಲಿದೆ. ಯಾವುದೇ ಆತಂಕ ಬೇಡ’ ಎಂದು ತಿಳಿಸಿದರು.

‘ಸರ್ಕಾರ ಉರುಳುತ್ತದೆ ಎಂದು ಹಲವರು ಹೇಳಿದ್ದರು. ದೀಪಾವಳಿ, ಯುಗಾದಿ, ಹುಣ್ಣಿಮೆ, ಅಮವಾಸ್ಯೆ, ಅಧಿವೇಶನ ಎಲ್ಲವೂ ಮುಗಿದು ಹೋದವು. ಸರ್ಕಾರಕ್ಕೆ ಏನೂ ಆಗಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.