
ಪ್ರಜಾವಾಣಿ ವಾರ್ತೆ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭದಲ್ಲೇ ಗೊಂದಲ ಉಂಟಾಯಿತು.
ಮೊದಲು ತೆರೆಯಬೇಕಾದ ಸ್ಟ್ರಾಂಗ್ ರೂಂ ಯಾವುದು ಎನ್ನುವುದು ಗೊಂದಲಕ್ಕೆ ಕಾರಣವಾಯಿತು. ನಿಗದಿತ ಕೊಠಡಿ ಬದಲಿಗೆ ಬೇರೆ ಕಡೆಗೆ ತಮ್ಮನ್ನು ಕರೆದುಕೊಂಡು ಹೋದ ಸಿಬ್ಬಂದಿ ವಿರುದ್ಧ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ. ಹರೀಶ್ ಕುಮಾರ್ ಗರಂ ಆದರು. ಆ ಕೊಠಡಿ ಬಳಿ ಚುನಾವಣಾ ವೀಕ್ಷಕರು ಇರಲಿಲ್ಲ. ಇದರಿಂದ ಸಿಬ್ಬಂದಿ ಮೇಲೆ ಅವರು ಸಿಟ್ಟಾದರು.
ಕೆಳಗಿನ ಮಹಡಿಯಲ್ಲಿರುವ ಮತ್ತೊಂದು ಸ್ಟ್ರಾಂಗ್ ರೂಂಗೆ ಬಂದರು. ಆದರೆ ಅಲ್ಲಿ ನಿಯಮಾವಳಿ ಪ್ರಕಾರ ಸ್ಟ್ರಾಂಗ್ ರೂಂ ತೆರೆಯುವ ನಿಗದಿತ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಸಿಬ್ಬಂದಿಗಾಗಿ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಚುನಾವಣಾ ಏಜೆಂಟರು ಕಾಯುತ್ತಿದ್ದಾರೆ. ಕೆಲ ಸಮಯದ ನಂತರ ಪ್ರಕ್ರಿಯೆ ಈಗ ಆರಂಭವಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.