ADVERTISEMENT

ಧ್ವಜ ಸ್ತಂಭ ಕಿತ್ತ ವ್ಯಕ್ತಿಗೆ ಸ್ಥಳೀಯರ ಬುದ್ಧಿವಾದ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 13:28 IST
Last Updated 15 ಆಗಸ್ಟ್ 2019, 13:28 IST

ಬೆಳಗಾವಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನಭವಾನಿ ನಗರದ ಮರಾಠಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಗುರುವಾರ ಧ್ವಜಾರೋಹಣ ‌ಮಾಡಿದ್ದ ರಾಷ್ಟ್ರಧ್ವಜದ ಸಮೇತ ಕಂಬವನ್ನು ಕಿತ್ತು ಹಾಕಿದ್ದ ಅಲ್ಲಿನ ನಿವಾಸಿಆನಂದ ಕೋಡಗ ಸ್ಥಳೀಯರ ಆಕ್ರೋಶಕ್ಕೆ ತುತ್ತಾದರು.

ಶಾಲೆ ವತಿಯಿಂದ ಧ್ವಜಾರೋಹಣ ನೆರವೇರಿಸಲಾಗಿತ್ತು. ‘ಕೆಲ ಸಮಯದ ನಂತರ ಬಂದ ಆನಂದ, ಈ ಮೈದಾನ ತನ್ನದೆಂದು ವಾದಿಸಿ ಧ್ವಜಕಂಬವನ್ನು ಕಿತ್ತು ಹಾಕಿದ್ದರು. ಸ್ಥಳೀಯರು ಕೂಡಲೇ ಅವರನ್ನು ಹಿಡಿದು ತಂದು ಧ್ವಜ ಕಂಬ ನೆಟ್ಟು ‌ಮತ್ತೊಮ್ಮೆ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ, ಧ್ವಜ ಕಂಬಕ್ಕೆ ಆನಂದ ಅವರಿಂದ ದೀಡ್‌ ನಮಸ್ಕಾರ ಹಾಕಿಸಿ, ಬುದ್ಧಿವಾದ ಹೇಳಿದ್ದಾರೆ. ವ್ಯಕ್ತಿ ತನ್ನಿಂದಾದ ಪ್ರಮಾದವನ್ನು ಒಪ್ಪಿಕೊಂಡು ನಮಸ್ಕಾರ ಮಾಡಿದ್ದಾರೆ’ ಎಂದು ತಿಳಿದುಬಂದಿದೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.