ಬೆಳಗಾವಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ಜಿಲ್ಲೆಯಾದ್ಯಂತ ನಡೆಸಿದ ಲೋಕ ಅದಾಲತ್ನಲ್ಲಿ ವಿವಿಧ 7,204 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹ 21.32 ಕೋಟಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲೂ ಪ್ರಕ್ರಿಯೆ ನಡೆದಿದೆ. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ್ಸಿಂಗ್ ಸೇರಿದಂತೆ 69 ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 26,859 ಪ್ರಕರಣಗಳನ್ನು ನಿಗದಿಪಡಿಸಲಾಗಿತ್ತು.
ಅದಾಲತ್ನ ವಿವರ
ವ್ಯಾಜ್ಯಗಳು; ಸಂಖ್ಯೆ; ಇತ್ಯರ್ಥವಾದವು; ಪರಿಹಾರ
ಬ್ಯಾಂಕಿಂಗ್; 550; 397; ₹ 3.17 ಕೋಟಿ
ಕ್ರಿಮಿನಲ್ ಕಂಪೌಂಡೇಬಲ್ ಅಫೆನ್ಸ್; 2000; 522; ₹ 66 ಲಕ್ಷ
ವಿದ್ಯುತ್ ಬಿಲ್; 522; 522; ₹ 44 ಲಕ್ಷ
ಕಾರ್ಮಿಕ ವ್ಯಾಜ್ಯ; 1; 1; ₹1.60 ಲಕ್ಷ
ವಾಹನ ಅಪಘಾತ; 1,700; 111; ₹.3.8 ಕೋಟಿ
ವೈವಾಹಿಕ ವ್ಯಾಜ್ಯ;700; 60;....
ಎನ್.ಐ. ಕಾಯ್ದೆ;3500; 689; ₹ 10.60 ಕೋಟಿ
ಇತರ ಸಿವಿಲ್ ಪ್ರಕರಣ;12,009; 659; ₹ 3.77 ಕೋಟಿ
ಇತರೆ; 5,100; 4,242; ₹ 26 ಲಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.