ADVERTISEMENT

ಖಾನಾಪುರ: ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯೋಗ ಖಾತರಿ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:38 IST
Last Updated 4 ಫೆಬ್ರುವರಿ 2026, 7:38 IST
ಖಾನಾಪುರ ತಾಲ್ಲೂಕಿನ ಕೌಂದಲ ಗ್ರಾಮದ ಬಳಿಯ ರೇಷ್ಮೆ ಕೃಷಿ ಪ್ರದೇಶದಲ್ಲಿ ಮಂಗಳವಾರ ಸಾಮಾಜಿಕ ಅರಣ್ಯ ಇಲಾಖೆಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ದಿನವನ್ನು ಆಚರಿಸಲಾಯಿತು.
ಖಾನಾಪುರ ತಾಲ್ಲೂಕಿನ ಕೌಂದಲ ಗ್ರಾಮದ ಬಳಿಯ ರೇಷ್ಮೆ ಕೃಷಿ ಪ್ರದೇಶದಲ್ಲಿ ಮಂಗಳವಾರ ಸಾಮಾಜಿಕ ಅರಣ್ಯ ಇಲಾಖೆಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ದಿನವನ್ನು ಆಚರಿಸಲಾಯಿತು.   

ಖಾನಾಪುರ: ತಾಲ್ಲೂಕಿನ ಕೌಂದಲ ಗ್ರಾಮದ ಹೊರವಲಯದ ರೇಷ್ಮೆ ಕೃಷಿ ಪ್ರದೇಶದಲ್ಲಿ ಮಂಗಳವಾರ ಸಾಮಾಜಿಕ ಅರಣ್ಯ ಇಲಾಖೆಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ದಿನ ಆಚರಿಸಲಾಯಿತು.

ವಲಯ ಅರಣ್ಯ ಅಧಿಕಾರಿ ಮೃತ್ಯುಂಜಯ ಗಣಾಚಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಜನೆಯ ಕೂಲಿ ಕಾರ್ಮಿಕರು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ತಾಂತ್ರಿಕ ಸಹಾಯಕ ಶಶಿಧರ ಸತ್ತಿಗೇರಿ, ಉಪ ವಲಯ ಅರಣ್ಯ ಅಧಿಕಾರಿಗಳಾದ ಅಶೋಕ ಹೂಲಿ, ಶಿವಲಿಂಗಪ್ಪ ಇಂಗಳಗಿ, ಎಂ.ಬಿ ಮುರಗೋಡ, ಬೀಟ್ ಫಾರೆಸ್ಟರ್ ಈರಣ್ಣ ಕರಲಿಂಗನವರ, ಸಿಬ್ಬಂದಿ ಮಹಾಂತೇಶ ಬಾಳೇಕುಂದ್ರಿ, ಅಮರ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT