ಹಿರೇಬಾಗೆವಾಡಿ: ನರೇಂದ್ರ ಮೋದಿ ಹುಟ್ಟು ಹಬ್ಬದ ನಿಮಿತ್ತ ಗ್ರಾಮದ ಬಸವೇಶ್ವರ ವೃತ್ತದಿಂದ ಅರಳೀಕಟ್ಟಿ ಕ್ರಾಸ್ ವರೆಗಿನ ರಸ್ತೆಗೆ ‘ನರೇಂದ್ರ ಮೋದಿ ರಸ್ತೆ’ ಎಂದು ಗುರುವಾರ ನಾಮಕರಣ ಮಾಡಲಾಯಿತು.
ಗ್ರಾಮದ ಹಿರಿಯರಾದ ಬಸನು ಸಪ್ಪಡಲಿ ನಾಮ ಫಲಕವನ್ನು ಉದ್ಘಾಟಿಸಿದರು. ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು.
ಉದ್ಯಮಿ ಹಾಗೂ ಬಿಜೆಪಿ ಮುಖಂಡ ಚೇತನ ಅಂಗಡಿ, ರಘು ಪಾಟೀಲ, ಎಲ್.ಡಿ.ಪಾಶ್ಚಾಪುರ, ಸಿ.ಎಂ.ಕುಂಬಾರ,ಸಿದ್ದು ಹುಕ್ಕೇರಿ, ಮಲ್ಲಿಕಾರ್ಜುನ ಗಟಿಗೆಣ್ಣವರ, ಬಸವರಾಜ ಡಮ್ಮಣಗಿ, ಶಿವರಾಯಗೌಡ ಪಾಟೀಲ, ಬಸವರಾಜ ಅರಳೀಕಟ್ಟಿ, ಮಲಗೌಡ ಹಾದಿಮನಿ, ಮಂಜುನಾಥ ಧರೆಣ್ಣವರ, ರವಿ ಪಾರ್ವತಿ, ಶ್ರೀಕಾಂತಗೌಡ ಮೇಳೆದ, ಪ್ರವಿಣ ಈಳಿಗೇರ, ಚಂದ್ರು ಕಪರಿ,ಆನಂದ ಪೋಲೆಸಿ,ನಾಗರಾಜ ಇಟಗಿ, ಬಸವರಾಜ ಹಂಚಿನಮನಿ,ಶಿವಕುಮಾರ ರೊಟ್ಟಿ,ಶಿವಾನಂದ ಅಂಕಲಗಿ, ಮಂಜುನಾಥ ಕುಂಬಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.