ADVERTISEMENT

ಜ.25ರಂದು ರೆಡ್ಡಿ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 13:19 IST
Last Updated 23 ಜನವರಿ 2020, 13:19 IST

ಬೆಳಗಾವಿ: ಇಲ್ಲಿನ ಸದಾಶಿವನಗರದಲ್ಲಿ ನೂತನವಾಗಿ ನಿರ್ಮಿಸಿರುವ ರೆಡ್ಡಿ ಸಮುದಾಯ ಭವನ ಮತ್ತು ವಿದ್ಯಾರ್ಥಿನಿಯರ ವಸತಿನಿಲಯದ ಉದ್ಘಾಟನಾ ಸಮಾರಂಭವನ್ನು ಜ.25ರಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಉಪಾಧ್ಯಕ್ಷ ಬಿ.ಎನ್. ನಾಡಗೌಡ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾಯೋಗಿ ವೇಮನರ ಜಯಂತಿ ಅಂಗವಾಗಿವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ಬಡ ವಿದ್ಯಾರ್ಥಿನಿಯರಿಗೆ ವಸತಿನಿಲಯಕ್ಕೆ ಉಚಿತ ಪ್ರವೇಶ ಪ್ರಾರಂಭಿಸಲಾಗುತ್ತದೆ. ಮಹಾಯೋಗಿ ವೇಮನರ ಆಶೀರ್ವಾದದಿಂದ ಸಮಾಜ ಸೇವೆ ಮಾಡಲು ರೆಡ್ಡಿ ಸಮಾಜ ಶ್ರಮಿಸುತ್ತಿದೆ’ ಎಂದರು.

‘ವೇಮನಾನಂದ ಶ್ರೀಗಳು ಭವನ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ,ಶಾಸಕರಾದ ಎಚ್‌.ಕೆ. ಪಾಟೀಲ, ರಾಮಲಿಂಗಾ ರೆಡ್ಡಿ,ಬಾಲಚಂದ್ರ ಜಾರಕಿಹೊಳಿ‌, ಬಸವರಾಜ ಹೊರಟ್ಟಿ, ಸೌಮ್ಯಾ ರೆಡ್ಡಿ, ಎಸ್.ಆರ್. ಪಾಟೀಲ, ಬೆಂಗಳೂರಿನ ರೆಡ್ಡಿ ಸಂಘದ ನಿರ್ದೇಶಕ ಡಿ.ಎನ್. ಲಕ್ಷ್ಮಣ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಎಸ್. ಜಯರಾಜ ರೆಡ್ಡಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಬಸವರಾಜ ಬಾವಲತ್ತಿ, ಕಾರ್ಯದರ್ಶಿ ಸಂಜೀವ ಸೊನ್ನದ, ಜಂಟಿ ಕಾರ್ಯದರ್ಶಿ ಮಂಜುನಾಥ ಪಾಟೀಲ,ಪ್ರಕಾಶ ಸೋನವಾಲಕರ, ಇಂದಿರಾ ಮಳಲಿ,ಡಾ.ಶ್ವೇತಾ ಸೋನವಾಲ್ಕರ, ಪ್ರೇಮಲತಾ ರಡ್ಡಿ, ತುಳಸಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.