ADVERTISEMENT

‘ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 14:37 IST
Last Updated 18 ಆಗಸ್ಟ್ 2019, 14:37 IST
ಬೆಳಗಾವಿಯ ರಾಜಾ ಲಖಮಗೌಡ ವಿಜ್ಞಾನ ಪದವಿ ಹಾಗೂ ಪಿಯು ಕಾಲೇಜುಗಳ ಚಟುವಟಿಕೆಗಳ ಉದ್ಘಾಟನೆಯನ್ನು ವಿಜ್ಞಾನಿ ಡಾ.ಸುಬರ್ಣಾ ರಾಯ್ ನೆರವೇರಿಸಿದರು. ಪ್ರೊ.ಆರ್.ಆರ್. ವಡಗಾವಿ, ಎನ್.ಎಂ. ಪಾಟೀಲ, ಎಸ್.ಜಿ. ನಂಜಪ್ಪನವರ, ಡಾ.ವಿ.ಡಿ. ಯಳಮಲಿ, ಡಾ.ಜೆ.ಎಸ್. ಕವಳೇಕರ, ವಿ.ಸಿ. ಕಾಮಗೋಳ ಇದ್ದಾರೆ
ಬೆಳಗಾವಿಯ ರಾಜಾ ಲಖಮಗೌಡ ವಿಜ್ಞಾನ ಪದವಿ ಹಾಗೂ ಪಿಯು ಕಾಲೇಜುಗಳ ಚಟುವಟಿಕೆಗಳ ಉದ್ಘಾಟನೆಯನ್ನು ವಿಜ್ಞಾನಿ ಡಾ.ಸುಬರ್ಣಾ ರಾಯ್ ನೆರವೇರಿಸಿದರು. ಪ್ರೊ.ಆರ್.ಆರ್. ವಡಗಾವಿ, ಎನ್.ಎಂ. ಪಾಟೀಲ, ಎಸ್.ಜಿ. ನಂಜಪ್ಪನವರ, ಡಾ.ವಿ.ಡಿ. ಯಳಮಲಿ, ಡಾ.ಜೆ.ಎಸ್. ಕವಳೇಕರ, ವಿ.ಸಿ. ಕಾಮಗೋಳ ಇದ್ದಾರೆ   

ಬೆಳಗಾವಿ: ‘ವಿದ್ಯಾರ್ಥಿಗಳು ಅಂಕ ಗಳಿಕೆಯೊಂದಿಗೆ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ವಿಜ್ಞಾನಿ ಡಾ.ಸುಬರ್ಣಾ ರಾಯ್ ಸಲಹೆ ನೀಡಿದರು.

ಇಲ್ಲಿನ ರಾಜಾ ಲಖಮಗೌಡ ವಿಜ್ಞಾನ ಪದವಿ ಹಾಗೂ ಪಿಯು ಕಾಲೇಜುಗಳ ಕ್ರೀಡಾ, ಸಾಂಸ್ಕೃತಿಕ ಮತ್ತು ವಿವಿಧ ಸಂಘಗಳ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವದಿಂದ ಅಧ್ಯಯನ ಮಾಡಬೇಕು. ಕರ್ತವ್ಯಗಳನ್ನು ಪ್ರತಿದಿನ ತಪ್ಪದೇ ನಿರ್ವಹಿಸಬೇಕು. ಸಂಶೋಧನೆ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ ಮಾತನಾಡಿ, ‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಪ್ರತೀಕ ಹಾಗೂ ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಪಿಯು ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಜಿ. ನಂಜಪ್ಪನವರ ಸ್ವಾಗತಿಸಿದರು. ಉಪ-ಪ್ರಾಚಾರ್ಯರಾದ ಡಾ.ಜೆ.ಎಸ್. ಕವಳೇಕರ ಪರಿಚಯಿಸಿದರು. ನಯನಾ ಮತ್ತು ಅದಿತ್ಯ ನಿರೂಪಿಸಿದರು. ಪ್ರೊ.ದಿವ್ಯಾ ಪರುಲೇಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.