ADVERTISEMENT

ನೋಡಿ: ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 7:57 IST
Last Updated 16 ನವೆಂಬರ್ 2021, 7:57 IST
ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಸ್ವಾಮೀಜಿ
ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಸ್ವಾಮೀಜಿ   

ಬೆಳಗಾವಿ: ಸ್ವಾಮೀಜಿಯೊಬ್ಬರು ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಘಟನೆ ಗೋಕಾಕ ತಾಲ್ಲೂಕಿನ ಬಳೋಬಾಳ ಗ್ರಾಮದಲ್ಲಿ ನಡೆದಿದೆ.

ಸಂಗನಬಸವ ಸ್ವಾಮೀಜಿ (53) ಮೃತರು.ಬಸವಯೋಗ ಮಂಟಪ ಟ್ರಸ್ಟ್‌ನ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದ ಅವರು, ನ.6ರಂದು ಸಂಜೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಿದ್ದರು. ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮುಖಂಡರು ಮತ್ತು ಭಕ್ತರ ಎದುರಿನಲ್ಲೇ ಅವರು ಸಾವಿಗೀಡಾದ ದೃಶ್ಯ ಭಕ್ತರೊಬ್ಬರ ಮೊಬೈಲ್‌ ಫೋನ್‌ನಲ್ಲಿ ಸೆರೆಯಾಗಿದೆ. ಅದು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.