ADVERTISEMENT

ಹುಲಿಯಾ ಸವಕಲಾಯ್ತು, ಈಗ ರಾಜಾಹುಲಿ ಕಣ್ರಯ್ಯಾ... ಸಿದ್ದರಾಮಯ್ಯ ಹೀಗಂದಿದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 12:50 IST
Last Updated 2 ಅಕ್ಟೋಬರ್ 2020, 12:50 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ: ‘ಹೌದು ಹುಲಿಯಾ ಅನ್ನೋದು ಸವಕಲಾಗೋಯ್ತು... ಈಗ ರಾಜಾ ಹುಲಿ ಬಂದಿದೆ’ ಎಂದು‌ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಕಾಂಗ್ರೆಸ್ ಭವನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡುವಾಗ ಅಭಿಮಾನಿಯೊಬ್ಬರು ‘ಹೌದು ಹುಲಿಯಾ’ ಎಂದರು. ಇದಕ್ಕೆ ಸಿದ್ದರಾಮಯ್ಯ ಮೇಲಿನಂತೆ ಪ್ರತಿಕ್ರಿಯಿಸಿದರು.

‘ನಂಗೆ ಹುಲಿಯಾ ಅಂತ ಕರೆದವರು ಜನರು. ಆದರೆ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜಾಹುಲಿ ಅಂತ ಕರೆದವರು ಅವರ ಪಕ್ಷದವರು’ ಎಂದಾಗ ನೆರೆದಿದ್ದವರಿಂದ ಚಪ್ಪಾಳೆಯ ಸುರಿಮಳೆಯಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.