ADVERTISEMENT

ಜಾತ್ರೆಗೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ: 6 ಜನ ಸಾವು, 16 ಮಂದಿಗೆ ಗಾಯ

ಯಲ್ಲಮ್ಮನ ಗುಡ್ಡಕ್ಕೆ ಹೊರಟಿದ್ದ ವಾಹನ ಮರಕ್ಕೆ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 21:18 IST
Last Updated 5 ಜನವರಿ 2023, 21:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಚುಂಚನೂರು ಗ್ರಾಮದ ಬಳಿ ಗುರುವಾರ ನಸುಕಿನ ಜಾವ, ಸವದತ್ತಿಯ ಯಲ್ಲಮ್ಮನ ಗುಡ್ಡದ ಜಾತ್ರೆಗೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ ಹೊಡೆದು, ಆರು ಜನ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ.

ರಾಮದುರ್ಗ ತಾಲ್ಲೂಕಿನ ಹುಲಕುಂದದ ದೀಪಾ ಶಂಕರ ಹರಿಜನ (31), ಇವರ ಪುತ್ರಿ ಸುಪ್ರಿತಾ ಶಂಕರ ಹರಿಜನ (11), ಸವಿತಾ ಮುಂಡಾಸ (17) , ಹಣಮವ್ವ ಮ್ಯಾಗಾಡಿ (25), ಇಂದ್ರವ್ವ ಸಿದ್ದಮೇತ್ರಿ (24) ಹಾಗೂ ಸುನ್ನಾಳದ ಮಾರುತಿ ಯಲ್ಲಪ್ಪ ಬನ್ನೂರ (42) ಮೃತಪಟ್ಟವರು. ಗಾಯಾಳುಗಳನ್ನು ಗೋಕಾಕದ ಉಮರಾಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ರಾತ್ರಿ 10ರ ಸುಮಾರಿಗೆ ಎಲ್ಲರೂ ಜಾತ್ರೆಗೆ ಹೊರಡಲು ಸಿದ್ಧರಾಗಿದ್ದರು. ಹುಲಕುಂದದಿಂದ ಎರಡು ಕಿ.ಮೀ ‍ಪಾದಯಾತ್ರೆ ಮಾಡಿ ಅಲ್ಲಿಂದ ಬಾಡಿಗೆಗೆ ಗೂಡ್ಸ್‌ ವಾಹನ ಮಾಡಿಕೊಂಡಿದ್ದರು.

ADVERTISEMENT

ಈ ವಾಹನವು ಚುಂಚನೂರು ಗ್ರಾಮದ ಸರಹದ್ದಿಗೆ ಬಂದಾಗ, ವಿಠಲಪ್ಪನ ದೇವಸ್ಥಾನದ ಮುಂದಿನ ಬೃಹತ್‌ ಆಲದ ಮರಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿತು.

ಅಪಘಾತದ ರಭಸಕ್ಕೆ ಐವರು ಸ್ಥಳ ದಲ್ಲೇ ಮೃತಪಟ್ಟರು. ಒಬ್ಬರು ಗೋಕಾಕ ತಾಲ್ಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಮಾರ್ಗದಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಇತರ ವಾಹನಗಳ ಸವಾರರು, ಗ್ರಾಮಸ್ಥರು ಸಹಾಯಕ್ಕೆ ಧಾವಿಸಿದರು.

ಸ್ಥಳಕ್ಕೆ ಬಂದ ಕಟಕೋಳ ಪೊಲೀಸರೂ ಆಂಬುಲೆನ್ಸ್‌ಗಳನ್ನು ಕರೆಯಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು.

ಮೃತಪಟ್ಟ ಇಬ್ಬರು ಬಾಲಕಿಯರು ಹಾಗೂ ಮೂವರು ಮಹಿಳೆಯರು ಒಂದೇ ಸಮುದಾಯಕ್ಕೆ ಸೇರಿದವರಾ ಗಿದ್ದು ಹುಲಕುಂದ ಗ್ರಾಮದಲ್ಲಿ ಸಾಮೂ ಹಿಕ ಅಂತ್ಯಸಂಸ್ಕಾರ ನೆರವೇರಿಸ
ಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.