ಕಡಬಿ: ‘ಕ್ರೀಡಾಕೂಟ ಅಥವಾ ನಿತ್ಯ ಜೀವನದಲ್ಲಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ರೂಢಿಸಿಕೊಳ್ಳಬೇಕು. ಮುಂದೆ ಗೆಲ್ಲುವುದಕ್ಕೆ ಸಿದ್ಧವಾಗಬೇಕು’ ಎಂದು ಕಾಂಗ್ರೆಸ್ ಮುಖಂಡ ವಿಶ್ವಾಸ್ ವೈದ್ಯ ಸಲಹೆ ನೀಡಿದರು.
ಇಲ್ಲಿನ ವಿಶ್ವಾಸ್ ವೈದ್ಯ ಅಭಿಮಾನಿ ಬಳಗ ವತಿಯಿಂದ ನಾಗರ ಪಂಚಮಿ ಪ್ರಯುಕ್ತ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆಟಗಾರರು ನಿರ್ಣಾಯಕರ ತೀರ್ಮಾನಗಳನ್ನು ಗೌರವಿಸಬೇಕು. ತಕರಾರು ಮಾಡಬಾರದು. ಕ್ರೀಡಾ ಮನೋಭಾವ ಪ್ರದರ್ಶಿಸಬೇಕು’ ಎಂದರು.
ಗ್ರಾ.ಪಂ. ಅಧ್ಯಕ್ಷೆ ಸುವರ್ಣ ತಳವಾರ, ಮುಖಂಡರಾದ ಚಂದ್ರು ಜಮಕಿ, ಮಹಾಂತೇಶ ಉಪ್ಪಿನ, ಛಾಯಪ್ಪ ಹುಂಡೇಕಾರ, ಲಕ್ಷ್ಮಣ ಕುಂಟೀರಪ್ಪಗೋಳ, ಶಿವಾನಂದ ಹಾದಿಮನಿ, ಗಂಗಪ್ಪ ಮೀಶಿ, ಸುಭಾನಿ ಮುಗಟಖಾನ, ಸಿದ್ದಪ್ಪ ಮಾಳಕ್ಕನವರ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.