ADVERTISEMENT

ಕಾಶ್ಮೀರಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ವಕೀಲರ ತಂಡ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 11:20 IST
Last Updated 28 ಫೆಬ್ರುವರಿ 2020, 11:20 IST
ಕಾಶ್ಮೀರಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ವಕೀಲ ತಂಡ
ಕಾಶ್ಮೀರಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ವಕೀಲ ತಂಡ   

ಬೆಳಗಾವಿ:ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಹುಬ್ಬಳ್ಳಿ ಕೆಎಲ್ಇ ಕಾಲೇಜಿನ ಮೂರು ಜನ ವಿದ್ಯಾರ್ಥಿಗಳನ್ನು ಹಿಂಡಲಗಾ ಕಾರಾಗೃಹದಲ್ಲಿ ವಕೀಲರ ತಂಡ ಶುಕ್ರವಾರ ಭೇಟಿ ಮಾಡಿತು.

ಹಿರಿಯ ವಕೀಲ ಪ್ರಸನ್ನ ಆರ್, ಮೈತ್ರಾಯಿ ಕೃಷ್ಣನ್, ಅವಾಯಿ ಚೌಕ್ಸಿ ಭೇಟಿ ಮಾಡಿದರು.

ಸುಮಾರು 45 ನಿಮಿಷಗಳವರೆಗೆ ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಅವರ ಪರ ವಕಾಲತ್ತು ನಡೆಸಲು ಒಪ್ಪಿಗೆ ಪತ್ರಕ್ಕೆ ಸಹಿ ಪಡೆದುಕೊಂಡರು.

ADVERTISEMENT

ಅಮೀರ್, ಬಾಸಿತ್, ತಾಲಿಬ್ ವಕಾಲತ್ತಿಗೆ ಸಹಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.