ADVERTISEMENT

ಬೈಲಹೊಂಗಲ: ಅಕ್ಕನ ಅಂಗಳದಲ್ಲಿ ‘ಮಹಿಳಾ ಸಂಸ್ಕೃತಿ’ ಕಲರವ

ಇಳಕಲ್ ಸೀರೆ ತೊಟ್ಟು ಅತ್ಯಾಕರ್ಷಿಸಿದ ವಿದ್ಯಾರ್ಥಿನಿಯರು, ಉಪನ್ಯಾಸಕಿಯರು

ರವಿ ಎಂ.ಹುಲಕುಂದ
Published 23 ಮಾರ್ಚ್ 2025, 6:43 IST
Last Updated 23 ಮಾರ್ಚ್ 2025, 6:43 IST
ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಮಹಿಳಾ ಸಂಸ್ಕೃತಿ ಹಬ್ಬ ಆಚರಣೆ ಕಾರ್ಯಕ್ರಮ ನಡೆಯಿತು
ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಮಹಿಳಾ ಸಂಸ್ಕೃತಿ ಹಬ್ಬ ಆಚರಣೆ ಕಾರ್ಯಕ್ರಮ ನಡೆಯಿತು    

ಬೈಲಹೊಂಗಲ: ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಶನಿವಾರ ನಡೆದ 'ಮಹಿಳಾ ಸಂಸ್ಕೃತಿ ಹಬ್ಬ' ನೋಡುಗರನ್ನು ರಂಜಿಸಿತು.

ಮಹಿಳಾ ಸಂಸ್ಕೃತಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿನಿಯರು ಜಾನಪದ, ದೇಶಭಕ್ತಿ, ಗ್ರಾಮೀಣ ಸೊಗಡನ್ನು ಬಿಂಬಿಸುವ ರೂಪಕಗಳನ್ನು ಪ್ರದರ್ಶಿಸಿದರು. ಭಾರತೀಯ ಸಂಸ್ಕೃತಿ, ಪರಂಪರೆ ಸಾರುವ ಭರತನಾಟ್ಯ, ಯೋಗ, ನೃತ್ಯ, ಲಾವಣಿ ಪದ, ಹಾಸ್ಯ ನೃತ್ಯ, ವಿವಿಧ ಬಗೆಯ ನೃತ್ಯಗಳ ಮೂಲಕ ಮೆರುಗು ತಂದರು. ಸಮೂಹ ಗಾಯನ, ನೃತ್ಯ ಆಕರ್ಷಿಸಿತು.

ಇಳಕಲ್‌ ಸೀರೆಯಲ್ಲಿ ಆಕರ್ಷಣೆ: ಅಕ್ಕನ ಅಂಗಳದಲ್ಲಿ ನಡೆದ ಮಹಿಳಾ ಸಂಸ್ಕೃತಿ ಹಬ್ಬದ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿನಿಯರು, ಉಪನ್ಯಾಸಕಿಯರು ಭಾರತೀಯ ಸಂಸ್ಕೃತಿಯಲ್ಲಿ ಇಳಕಲ್ ಸೀರೆ ತೊಟ್ಟು ಅತ್ಯಾಕರ್ಷಿಸಿದರು. ಇಳಕಳ್‌ ಸೀರೆ ಹಾಗೂ ಗ್ರಾಮೀಣ ಉಡುಗೆಯ ಮಹತ್ವದ ಕುರಿತು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಬಾಪಟ್ ಮಹಿಳಾ ಸಂಸ್ಕೃತಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಹಿಳೆಯರ ಮೇಲೆ ಶೋಷಣೆ ನಿಲ್ಲದಿರುವುದು ವಿಷಾದನೀಯ’ ಎಂದರು.

ADVERTISEMENT

ಮುಖ್ಯ ಅತಿಥಿ, ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪೂರ ಮಾತನಾಡಿ, ‘ಮಹಿಳಾ ಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ. ಮಹಿಳೆಯರು ಶಿಕ್ಷಣ ಕಲಿತು ಉನ್ನತ ಸ್ಥಾನ ಪಡೆದು ಎಲ್ಲರಿಗೂ ಸ್ಪೂರ್ತಿಯಾಗಬೇಕು’ ಎಂದರು.

ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಅಪರ್ಣಾ ಗಣಾಚಾರಿ, ಕಿರುತೆರೆ ನಟಿ ರಾಜೇಶ್ವರಿ ದೇಶಪಾಂಡೆ, ಸರಿಗಮಪ ಸೀಸನ್ ಸ್ಪರ್ಧೆ ಅನಘಾ ಪಾಟೀಲ ವೇದಿಕೆಯಲ್ಲಿದ್ದರು. ಶ್ರೇಯಾ ಭದ್ರಶೆಟ್ಟಿ ಸ್ವಾಗತಿಸಿದಳು. ಮೇಘಾನಾ ಅಂಗಡಿ, ನೀಶಾ ಮುಕಂದ ನಿರೂಪಿಸಿದರು. ವಿಜಯಲಕ್ಷ್ಮಿ ಉಳವಿ ವಂದಿಸಿದಳು.

ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಮಹಿಳಾ ಸಂಸ್ಕೃತಿ ಹಬ್ಬ ಕಾರ್ಯಕ್ರಮದಲ್ಲಿ  ಮದುವೆ ಶಾಸ್ತ್ರ ನಡೆಯಿತು
ವಿದ್ಯಾರ್ಥಿನೀಯರಿಂದ ಸಮೂಹ ನೃತ್ಯ, ಗಾಯನ ಗ್ರಾಮೀಣ ಉಡುಗೆಯ ಮಹತ್ವ ಸಾರಿದ ವಿದ್ಯಾರ್ಥಿನಿಯರು
ವಿದ್ಯಾರ್ಥಿನಿಯರಲ್ಲಿ ಭಾರತೀಯ ಸಂಸ್ಕೃತಿ ಸಂಸ್ಕಾರ ಪರಂಪರೆ ಆಚರಣೆ ಬೆಳೆಸುವುದರ ಜೊತೆ ಸಂಸ್ಕಾರದ ಶಿಕ್ಷಣ ನೀಡಲಾಗುತ್ತಿದೆ
ಡಾ.ಸಿ.ಬಿ.ಗಣಾಚಾರಿ ಪ್ರಾಚಾರ್ಯ
ಮಹಿಳಾ ಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ. ಮಹಿಳೆಯರು ಶಿಕ್ಷಣ ಕಲಿತು ಉನ್ನತ ಸ್ಥಾನ ಪಡೆದು ಎಲ್ಲರಿಗೂ ಸ್ಪೂರ್ತಿಯಾಗಬೇಕು
ಪ್ರಭಾವತಿ ಫಕೀರಪೂರ ಉಪವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.