ADVERTISEMENT

ಬೆಳಗಾವಿ: ವಿರಾಟ ಹಿಂದೂ ಸಮ್ಮೇಳನ 3ರಂದು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:51 IST
Last Updated 1 ಜನವರಿ 2026, 6:51 IST
   

ಚಿಕ್ಕೋಡಿ: ಪಟ್ಟಣದ ಕಿವಡ ಮೈದಾನದಲ್ಲಿ ಜ.3ರಂದು ಸಂಜೆ 5.30ಕ್ಕೆ ವಿರಾಟ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ವಿರಾಟ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಸಾನ್ನಿದ್ಯ ವಹಿಸುವರು. ದಿಕ್ಸೂಚಿ ಭಾಷಣಕಾರರಾಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಚಾಲನಾ ಸಮಿತಿ ಅಧ್ಯಕ್ಷ ಜಗದೀಶ ಕವಟಗಿಮಠ, ಉಪಾಧ್ಯಕ್ಷ ಸುಭಾಷ ಕವಲಾಪುರೆ, ಶ್ರೀಪಾಲ ಮುನ್ನೋಳಿ, ಅನಿಲ ಮಾನೆ, ಸಂಜಯ ಅರಗಿ, ಪ್ರವೀಣ ಕಾಂಬಳೆ, ಶಾಂಭವಿ ಅಶ್ವತ್ಥಪುರ, ಶಿವಪುತ್ರಪ್ಪ ಜತ್ತಿ, ಬಾಹುಬಲಿ ನಸಲಾಪುರೆ, ರಮೇಶ ಕುಡತರಕರ, ವಿನಾಯಕ ಬನಹಟ್ಟಿ, ಸದಾಶಿವ ಮಾಳಿ, ಸುದರ್ಶನ ತಮ್ಮಣ್ಣವರ, ರಾಜು ದಿಕ್ಷೀತ, ಪ್ರಾಣೇಶ ಕೌಜಲಗಿ ಉಪಸ್ಥಿತರಿರುವರು.

ವಿರಾಟ ಹಿಂದೂ ಸಮ್ಮೇಳನದ ನಿಮಿತ್ಯ ಪಟ್ಟಣದ ಬಸವೇಶ್ವರ ವೃತ್ತದಿಂದ ಅಂದು ಮಧ್ಯಾಹ್ನ 3.30ಕ್ಕೆ ಶೋಭಾಯಾತ್ರೆ ಹೊರಡುವದು. ಶೋಭಾಯಾತ್ರೆಯಲ್ಲಿ ಭಾಗವಹಿಸುವವರು ಕನಿಷ್ಠ 30 ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಉಪಸ್ಥಿತರಿರುವಂತೆ ಸಂಚಾಲನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.