ಸಾವಳಗಿ (ಬೆಳಗಾವಿ ಜಿಲ್ಲೆ): ಗೋಕಾಕ ತಾಲ್ಲೂಕಿನಲ್ಲಿ ಪ್ರವಾಹದ ಹೊಡೆತಕ್ಕೆ ವಿವಿಧ ಗ್ರಾಮಗಳಲ್ಲಿನ ಪೈಪ್ಪೈಲ್ಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಯಿತು.
ಸಾವಳಗಿಯಲ್ಲಿ ನೀರಿನ ಅಭಾವ ಉಂಟಾಗಿದೆ. ಇದನ್ನು ಮನಗಂಡ ಸಾವಳಗಿ ಗೆಳೆಯರ ಬಳಗದವರು ಸಾವಳಗಿ ಮತ್ತು ನಂದಗಾಂವಕ್ಕೆ ನೀರಿನ ವ್ಯವಸ್ಥೆ ಮಾಡಿದರು.
ಶಿವಲಿಂಗ ಕಬಾಡಗಿ, ಶಿಕ್ಷಕ ಕರಿಗಾರ, ಶಿವಲಿಂಗ ಕೊಟಬಾಗಿ, ಮಹೇಂದ್ರ ಶಿರಹಟ್ಟಿ, ವಿನಾಯಕ ಪಾಟೀಲ, ನಿಂಗಪ್ಪ ಅಗಸಗಿ, ರಮೇಶ ಸಾವಳಗಿ, ಅಡಿವೆಪ್ಪ ನಾಯ್ಕ, ಲಕ್ಷ್ಮಣ ಶ್ಯಾಬಂದ್ರಿ, ಶಂಕರ ಪಾಟೀಲ, ಬಾಳಪ್ಪ ನಾಯ್ಕ, ಭರಮಪ್ಪ ಗುಂತಕಲ್, ಸೋಮನಗೌಡ ಬಿ. ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.