ADVERTISEMENT

ಗೋಕಾಕ: ನೀರುಪಾಲಾಗಿದ್ದ ಯುವಕನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 5:46 IST
Last Updated 11 ಸೆಪ್ಟೆಂಬರ್ 2022, 5:46 IST
ದಂಡಪ್ಪ ಬಸಪ್ಪ ಮಾಲದಿನ್ನಿ
ದಂಡಪ್ಪ ಬಸಪ್ಪ ಮಾಲದಿನ್ನಿ   

ಗೋಕಾಕ (ಬೆಳಗಾವಿ ಜಿಲ್ಲೆ): ಗೋಕಾಕ ತಾಲ್ಲೂಕಿನ ಕೊಳವಿ‌ ಗ್ರಾಮದಲ್ಲಿ ಶುಕ್ರವಾರ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕ ಭಾನುವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಕೊಳವಿ ಗ್ರಾಮದ ದಂಡಪ್ಪ ಬಸಪ್ಪ ಮಾಲದಿನ್ನಿ (25) ಮೃತಪಟ್ಟ ಯುವಕ. ಬೆಣಚಿನಮರಡಿ– ಕೊಳವಿ ಮಾರ್ಗ ಮಧ್ಯೆ ಶವ ಪತ್ತೆಯಾಗಿದೆ.

ಶುಕ್ರವಾರ ಸಂಜೆ ಹೊಲಕ್ಕೆ ಹೊರಟಿದ್ದ ಸಂದರ್ಭದಲ್ಲಿ ಹಳ್ಳದ ನೀರು ರಭಸವಾಗಿ ಹರಿಯುತ್ತಿತ್ತು. ಆಸರೆಗಾಗಿ ಯುವಕ ದಡದ ಮರವೊಂದರ ಬಳಿ ನಿಂತುಕೊಂಡಿದ್ದ. ಏಕಾಏಕಿ ನೀರಿನ ಹರಿವು ಹೆಚ್ಚಳವಾಗಿ ಕೊಚ್ಚಿಕೊಂಡು ಹೋಗಿದ್ದ. ಪೊಲೀಸ್‌ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೂರು ದಿನಗಳಿಂದ ಹುಡುಕಾಟ ನಡೆಸಿದ್ದರು.

ADVERTISEMENT

ಭಾನುವಾರ ಬೆಳಿಗ್ಗೆ ಹಳ್ಳದ ಕಡೆ ಹೋದ ಜನರಿಗೆ ಶವ ತೇಲುತ್ತಿರುವುದು ಕಂಡುಬಂತು. ಪೊಲೀಸರಿಗೆ ಮಾಹಿತಿ ನೀಡಿದರು. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.