ADVERTISEMENT

ಅತ್ತೆ ಕೊಂದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:40 IST
Last Updated 22 ಮೇ 2018, 19:40 IST
ಅತ್ತೆ ಕೊಂದ ಆಟೊ ಚಾಲಕ
ಅತ್ತೆ ಕೊಂದ ಆಟೊ ಚಾಲಕ   

ಬೆಂಗಳೂರು: ಹಳೆಗುಡ್ಡದಹಳ್ಳಿ ಸಮೀಪದ ದೇವರಾಜ ಅರಸು ನಗರದಲ್ಲಿ ಆಟೊ ಚಾಲಕನೊಬ್ಬ ತನ್ನ ಅತ್ತೆಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.

ಮುಬೀನಾ ತಾಜ್ (52) ಕೊಲೆಯಾದವರು. ಆರೋಪಿ ಸೈಯದ್ ರಹೀಂನನ್ನು (25) ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಎರಡು ವರ್ಷಗಳ ಹಿಂದೆ ಶಬೀನಾ ತಾಜ್ ಎಂಬುವರನ್ನು ವಿವಾಹವಾಗಿದ್ದು ಅರ್ಫತ್ ನಗರದಲ್ಲಿ ನೆಲೆಸಿದ್ದಾನೆ.

ADVERTISEMENT

‘ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾನೆ’ ಎಂದು ಶಬೀನಾ, ವಾರದ ಹಿಂದೆ ತವರು ಮನೆ ಸೇರಿದ್ದರು. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಅಲ್ಲಿಗೆ ಹೋದ ಆರೋಪಿ, ಪತ್ನಿಯನ್ನು ತನ್ನೊಟ್ಟಿಗೆ ಕಳುಹಿಸಿಕೊಡುವಂತೆ ಗಲಾಟೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಚಾಕುವಿನಿಂದ ಅತ್ತೆಯ ಹೊಟ್ಟೆ ಹಾಗೂ ಕುತ್ತಿಗೆಗೆ ಇರಿದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮುಬೀನಾ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.