ಬೆಂಗಳೂರು: ಜರಗನಹಳ್ಳಿಯ ಎ ಕೃಷ್ಣಪ್ಪ (84) ಬುಧವಾರ ನಿಧನರಾದರು.
ಇವರಿಗೆ ಐದು ಮಂದಿ ಪುತ್ರರು, ಒಬ್ಬ ಮಗಳು ಇದ್ದಾರೆ. ಇವರು ಕರ್ನಾ ಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಉಪಾಧ್ಯಕ್ಷ ಎ.ಮುನಿಸಂಜೀವಪ್ಪನವರ ಅಣ್ಣ. ಅರವತ್ತರ ದಶಕದಲ್ಲಿ ನಗರದ ಹೊರವಲಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದಾಗ ಇವರು ಟ್ಯಾಂಕರ್ ಗಳಲ್ಲಿ ಉಚಿತವಾಗಿ ನೀರು ಪೂರೈಸಿದ್ದ ರಿಂದ ಕೊಳಾಯಿ ಕೃಷ್ಣಪ್ಪ ಎಂದು ಜನಪ್ರಿಯರಾಗಿದ್ದರು. ಜರಗನಹಳ್ಳಿಯ ಸ್ಮಶಾನದಲ್ಲಿ ಗುರು ವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.