ಬೆಂಗಳೂರು: ರಾಜ್ಯದ 33 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಈ ಎಲ್ಲ ಅಧಿಕಾರಿಗಳು ಸದ್ಯ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಲ್ಲೇ ಮುಂದುವರಿಸಲಾಗಿದೆ. ಇದೇ ವರ್ಷದ ಫೆ.23ರಿಂದ ಪೂರ್ವಾನ್ವಯವಾಗು
ವಂತೆ ಎಲ್ಲರಿಗೂ ಪದೋನ್ನತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರ್ಟಿಇ ಅರ್ಜಿ ಸಲ್ಲಿಕೆ
ಹೊಸಕೋಟೆ: ಉಚಿತ ಶಿಕ್ಷಣ ದಾಖಲಾತಿಗಾಗಿ ಹೊಸಕೋಟೆ ತಾಲ್ಲೂಕಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮಾ.21 ಕಡೆ ದಿನ. ಎಲ್ಕೆಜಿ ತರಗತಿ ಪ್ರವೇಶಕ್ಕೆ 3 ವರ್ಷ 10 ತಿಂಗಳು ಮತ್ತು 1ನೇ ತರಗತಿಗೆ ಪ್ರವೇಶಕ್ಕೆ 5 ವರ್ಷ 10 ತಿಂಗಳು ವಯೋಮಿತಿ ನಿಗದಿ ಪಡಿಸಲಾ
ಗಿದೆ. ಆಸಕ್ತರು ಆನ್ಲೈನ್ www.schooleducation.kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ 08027931311/ 9900577769
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.