ADVERTISEMENT

ಕೆ.ಆರ್.ಪುರ: 26 ಮಂದಿ ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:57 IST
Last Updated 21 ಏಪ್ರಿಲ್ 2013, 19:57 IST

ಕೃಷ್ಣರಾಜಪುರ: ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 26 ಮಂದಿ ಕಣದಲ್ಲಿ ಉಳಿದಿದ್ದಾರೆ.

ಬೈರತಿ ಎ. ಬಸವರಾಜ್ (ಕಾಂಗ್ರೆಸ್), ಎನ್.ಎಸ್.ನಂದೀಶ ರೆಡ್ಡಿ (ಬಿಜೆಪಿ), ರವಿಪ್ರಕಾಶ್ (ಜೆಡಿಎಸ್), ಗೌರಮ್ಮ (ಸಿಪಿಎಂ), ಆರ್.ಸತ್ಯನಾರಾಯಣ (ಕೆಜೆಪಿ), ಅನುಪಮ ಎಂ.ಎಲ್.(ಜೆಡಿಯು), ಶ್ರೀನಿವಾಸ್ ಎನ್. (ಬಿಎಸ್‌ಪಿ), ಅಪ್ಪಣ್ಣ (ಸಿಪಿಐಎಂಎಲ್), ಪೈರುಷ್ ಪಾಷಾ (ಬಿಎಸ್‌ಆರ್ ಕಾಂಗ್ರೆಸ್), ಅಯೂಬ್ ಪಾಷಾ, ಉಮೇಶ್, ಹಿಮಾಲಯ್, ಕೋದಂಡರೆಡ್ಡಿ, ಗಂಗಾಧರ, ಚಂದ್ರಕಲಾ, ಧನಂಜಯ, ದೇವರಾಜು ಸಿ, ನಂದೀಶಪ್ಪ ನಾಯಕ, ಪಾಪಯ್ಯ ರೆಡ್ಡಿ, ಪರಮಾನ್ ಬಾಷಾ, ಬಸವರಾಜ್ ಎನ್, ರಾಮಕೃಷ್ಣ ಎಂ, ಶ್ರೀನಿವಾಸ್, ಸತ್ಯನಾರಾಯಣ ಕೆ, ಸರಳಾಬಾಯಿ, ಹರ್ಮನ್ ರಾಬಿನ್ ಸಲ್ದಾನ, (ಪಕ್ಷೇತರರು) ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 335 ಮತಗಟ್ಟೆಗಳಿದ್ದು, 1,62,564 ಪುರುಷರು ಮತ್ತು 1,45,843 ಮಹಿಳಾ ಮತದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.