ADVERTISEMENT

ಜನಪದ ತಾಳಕ್ಕೆ ಬುಡಕಟ್ಟು ಯುವಜನರ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2014, 19:50 IST
Last Updated 1 ಫೆಬ್ರುವರಿ 2014, 19:50 IST
ನೆಹರೂ ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್) ಮತ್ತು ಗೃಹ ಸಚಿವಾಲಯದ ವತಿಯಿಂದ ನಗರದಲ್ಲಿ ಶನಿ­ವಾರ ಏರ್ಪಡಿಸಿದ್ದ ಬುಡಕಟ್ಟು ಯುವ ವಿನಿಮಯ ಶಿಬಿರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿ­ದರು. ಎನ್‌ವೈಕೆಎಸ್‌ ಪ್ರಧಾನ ನಿರ್ದೇಶಕ ಸಲೀಂ ಅಹಮ್ಮದ್‌, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ ಮತ್ತು  ಇತರರು ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ನೆಹರೂ ಯುವ ಕೇಂದ್ರ ಸಂಘಟನೆ (ಎನ್‌ವೈಕೆಎಸ್) ಮತ್ತು ಗೃಹ ಸಚಿವಾಲಯದ ವತಿಯಿಂದ ನಗರದಲ್ಲಿ ಶನಿ­ವಾರ ಏರ್ಪಡಿಸಿದ್ದ ಬುಡಕಟ್ಟು ಯುವ ವಿನಿಮಯ ಶಿಬಿರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿ­ದರು. ಎನ್‌ವೈಕೆಎಸ್‌ ಪ್ರಧಾನ ನಿರ್ದೇಶಕ ಸಲೀಂ ಅಹಮ್ಮದ್‌, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ ಮತ್ತು ಇತರರು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಾದ್ಯಗಳು ಬೇರೆ ಬೇರೆಯಾಗಿದ್ದರೂ ಹೊಮ್ಮು­ತ್ತಿದ್ದ ತಾಳದ ನಾದಕ್ಕೆ ಹೆಜ್ಜೆಯಾದ ಬುಡಕಟ್ಟು ಯುವಜನ. ವಿವಿಧ ಜನಪದ ವಾದ್ಯಗಳು ಮೇಳೈಸಿ ಸೃಷ್ಟಿಸಿದ ಕಲಾಲೋಕ. ಹಸಿರೆಲೆ ತೊಟ್ಟು, ಕೈಯಲ್ಲಿ ಹೂಬಾಣ ಹಿಡಿದ ಯುವಕರು, ಬಣ್ಣ ಬಣ್ಣದ ದಿರಿಸು ತೊಟ್ಟು ಮೊಗದ ಅಂಚಿಗೆ ನಾಚಿಕೆ ತುಂಬಿ ಕುಣಿತಕ್ಕೆ ಹೆಜ್ಜೆಯಾದ ಯುವತಿಯರು.

ನೆಹರೂ ಯುವ ಕೇಂದ್ರ ಸಂಘಟನೆ ಮತ್ತು ಗೃಹ ಸಚಿವಾಲಯದ ವತಿಯಿಂದ ನಗ­ರದ ಯವನಿಕಾ ಸಭಾಂಗಣ­ದಲ್ಲಿ ಶನಿವಾರ ಆಯೋ­ಜಿಸಿದ್ದ ಏಳು ದಿನಗಳ ಬುಡಕಟ್ಟು ಯುವ ವಿನಿಮಯ ಶಿಬಿರದಲ್ಲಿ ಬುಡಕಟ್ಟು ಯುವಜನರ ನೃತ್ಯ ಸೃಷ್ಟಿಸಿದ ದೃಶ್ಯಗಳಿವು.
ಶಿಬಿರ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾ­ರೆಡ್ಡಿ, ‘ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರುವ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ  ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

ನೆಹರೂ ಯುವ ಕೇಂದ್ರ ಸಂಘಟನೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಪ್ರಧಾನ ನಿರ್ದೇಶಕ ಸಲೀಂ ಅಹಮ್ಮದ್‌, ರಾಜ್ಯ ಪೊಲೀಸ್ ಮಹಾ­ನಿರ್ದೇಶಕ ಲಾಲ್‌ ರೋಕುಮಾ ಪಚಾವೊ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಪ್ರಧಾನ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿ, ನಿರ್ದೇಶಕ ವಿಕಾಸ್‌ಕುಮಾರ್ ವಿಕಾಸ್, ಎನ್‌ವೈ­ಕೆಎಸ್‌ ಸದಸ್ಯ ಮಹಾಂತೇಶ್ ಹಟ್ಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.