
ಪ್ರಜಾವಾಣಿ ವಾರ್ತೆಬೆಂಗಳೂರು: ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯು 2011ನೇ ಸಾಲಿನ `ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ~ಕ್ಕೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.ಹಸ್ತಪ್ರತಿಯು ಕಥೆಗಾರರ ಮೊದಲ ಕಥಾ ಸಂಕಲನವಾಗಿರಬೇಕು.
ಕಥೆಗಾರರು ಐದಕ್ಕಿಂತ ಹೆಚ್ಚಿನ ಕಥೆಗಳುಳ್ಳ ಹಸ್ತಪ್ರತಿಯ ಮೂರು ಪ್ರತಿಗಳನ್ನು ಡಿ.ಟಿ.ಪಿ ಮಾಡಿಸಿ, ಬೈಂಡ್ ಹಾಕಿಸಿ ಇದೇ 31ರೊಳಗೆ ಸಲ್ಲಿಸಬೇಕು. ಕಥೆಗಾರರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ಹಸ್ತಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ: ವಿಜಯಕಾಂತ ಪಾಟೀಲ, ಪ್ರಧಾನ ಸಂಚಾಲಕರು, ಕನ್ನಡ ಯುವಜನ ಕ್ರಿಯಾ ಸಮಿತಿ, ಚಿಕ್ಕಾಂಶಿ, ಹೊಸೂರು, ಹಾನಗಲ್ಲ ತಾಲ್ಲೂಕು - 581104. ಹೆಚ್ಚಿನ ಮಾಹಿತಿಗೆ 9731717430 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.