ADVERTISEMENT

ಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ವಿಜಯಪುರ: ಇಲ್ಲಿನ ಗುರಪ್ಪನಮಠದ ನೀಲಗಿರೀಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ವರಮಹಾಲಕ್ಷ್ಮಿ ಶಕ್ತಿ ಪೀಠದ ವತಿಯಿಂದ ಲೋಕಲ್ಯಾಣಾರ್ಥವಾಗಿ ವರಮಹಾಲಕ್ಷ್ಮಿ ದೇವಿಯವರಿಗೆ ಸಾರ್ವತ್ರಿಕ  ಲಕ್ಷಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪೂಜಾಕಾರ್ಯಗಳ ಅಂಗವಾಗಿ ಮಹಾಗಣಪತಿ ಪ್ರಾರ್ಥನೆ, ಪುಣ್ಯಾಹವಾಚನ, ಕಳಶ ಸ್ಥಾಪನೆ, ಪಂಚಗವ್ಯಮೇಳ, ಹೋಮಾದಿಕಾರ್ಯಗಳು ನಡೆಸಲಾಯಿತು. ಲಕ್ಷಕುಂಕುಮಾರ್ಚನೆ, ತೀರ್ಥಪ್ರಸಾದ ವಿನಿಯೋಗ, ಮಡಿಲುತುಂಬುವ ಪೂಜೆ ನಡೆಯಿತು. ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎಂ.ನಾರಾಯಣಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.