ADVERTISEMENT

ವಿದ್ಯಾರ್ಥಿಗಳಿಂದ ಮಾರುಕಟ್ಟೆ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST

ಬೆಂಗಳೂರು: ಬಿಬಿಎಂಪಿ ಟಸ್ಕರ್‌­ಟೌನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೋಮ­ವಾರ ಕೆ.ಆರ್‌.­­ಮಾರು­ಕಟ್ಟೆಯನ್ನು ಸ್ವಚ್ಛ­ಗೊಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೇಯರ್‌ ಬಿ.ಎಸ್‌.­ಸತ್ಯನಾರಾಯಣ ಅವರು, ಮಾರು­ಕಟ್ಟೆಯ ವಾಹನ ನಿಲುಗಡೆ ಸ್ಥಳ ಹಾಗೂ ರಸ್ತೆಗಳನ್ನು ಶುಚಿ­ಯಾಗಿಟ್ಟು­ಕೊಳ್ಳಲು ವ್ಯಾಪಾರಿಗಳು ಮುಂದಾಗಬೇಕು. ಅಲ್ಲದೇ ಮಾರುಕಟ್ಟೆ­ಯನ್ನು ಸ್ವಚ್ಛ­ವಾಗಿಟ್ಟುಕೊಳ್ಳಲು ಇಲ್ಲಿನ ವ್ಯಾಪಾರಿ­ಗಳು ಬಿಬಿಎಂಪಿ ಜತೆ ಸಹಕರಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.